ಮೋದಿಯಿಂದ ಇಂದೇ ಸಿಎಂ ಸ್ಥಾನ ಫೈನಲ್ : ಸೋಮವಾರವೇ ಪ್ರಮಾಣ ವಚನ…!
ರಾಜ್ಯದಲ್ಲಿ ಸಿಎಂ ಬದಲಾವಣೆ ಬಹುತೇಕ ಖಚಿತವಾಗಿದ್ದು ಮುಂದಿನ ಸಿಎಂ ಯಾರು ಎನ್ನುವ ಪ್ರಶ್ನೆ ಮೂಡಿದೆ. ಮಾತ್ರವಲ್ಲದೇ ಕೇಸರಿ ಬಣದಲ್ಲಿ ಹಲವಾರು ಸಚಿವರು ಸಿಎಂ ರೇಸ್ ನಲ್ಲಿ ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸಿದ್ದಾರೆ. ಇನ್ನೂ ಕೆಲವರು ತಾವೇ ಸಿಎಂ ಎನ್ನುವ ಹೇಳಿಕೆಗಳನ್ನು ಬಹಿರಂಗವಾಗಿ ಕೊಡುತ್ತಿದ್ದಾರೆ.
ಆದರೆ ಹೈಕಮಾಂಡ್ ಮಟ್ಟದಲ್ಲಿ ಮೂವರ ಹೆಸರು ಫೈನಲ್ ಆಗಿದ್ದಾರೆನ್ನಲಾಗುತ್ತಿದೆ. ಆ ಮೂವರು ಹೆಸರಿಗೆ ಬಿಎಸ್ ವೈ ಕೂಡ ಒಪ್ಪಿಗೆ ಸೂಚಿಸಿದ್ದಾರೆನ್ನಲಾಗುತ್ತಿದೆ. ಮಾತ್ರವಲ್ಲದೇ ಇಂದೇ ಮೋದಿ ಸಿಎಂ ಸ್ಥಾನವನ್ನು ಫೈನಲ್ ಮಾಡುವುದು ಖಚಿತ ಎಂದು ಉನ್ನತ ಮೂಲಗಳು ತಿಳಿಸಿವೆ.
ಅಮಿತ್ ಶಾ, ನಡ್ಡಾ, ಸಂತೋಷ್ ಹಾಗೂ ಯಡಿಯೂರಪ್ಪ ಗ್ರೀನ್ ಸಿಗ್ನಲ್ ಕೊಟ್ಟ ಮುರುಗೇಶ್ ನಿರಾಣಿ, ಕಾಗೇರಿ, ಸಿಟಿ ರವಿ ಮೂವರ ಹೆಸರು ಫೈನಲ್ ಮಾಡಲಾಗಿದೆ ಎನ್ನಲಾಗುತ್ತಿದೆ. ಲಿಂಗಾಯತ ಕೋಟದಲ್ಲಿ ಮುರುಗೇಶ್ ನಿರಾಣಿ, ಬ್ಯಾಹ್ಮಣ ಕೋಟಾದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ, ಒಕ್ಕಲಿಗ ಕೋಟಾದಲ್ಲಿ ಸಿಟಿ ರವಿ ರೇಸ್ ನಲ್ಲಿದ್ದಾರೆ.
ಇನ್ನೂ ಈಗಾಗಲೇ ಯಡಿಯೂರಪ್ಪ ಅವರಿಗೆ ಸಿಎಂ ಸ್ಥಾನದಿಂದ ರಾಜೀನಾಮೆ ಕೊಡುವಂತೆ ಮೆಸೇಜ್ ಬಂದಿದ್ದು, ಸೋಮವಾರ ಮಧ್ಯಾಹ್ನ 3 ಗಂಟೆಗೆ ಗವರ್ನರ್ ಭೇಟಿಯಾಗಲಿದ್ದಾರೆ. ಬೆಂಗಳೂರಿನಗೆ ತಕ್ಷಣ ಬರುವಂತೆ ಎಲ್ಲಾ ಎಂಎಲ್ಎಗಳಿಗೆ ತಿಳಿಸಲಾಗಿದೆ. ಸೋವಮಾರವೇ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮಾಡಲಿದ್ದು, ನೂತನ ಸಿಎಂ ಪ್ರಮಾಣವಚನ ಸ್ವೀಕರಿಸಲಿದ್ದಾರೆನ್ನಲಾಗುತ್ತಿದೆ.