ಮುಗಿಯದ ಖಾತೆ ಕ್ಯಾತೆ : ಕುತೂಹಲ ಮೂಡಿಸಿದ ಆನಂದ್ ಸಿಂಗ್ ಮುಂದಿನ ನಡೆ!
ಮುಗಿದೇ ಹೋಯ್ತು ಅನ್ನೋ ಹೊತ್ತಿಗೆ ಮತ್ತೆ ಚಿಗುರೊಡೆಯುತ್ತಿದೆ ಖಾತೆ ಕ್ಯಾತೆ. ಹೌದು.. ಸಚಿವ ಸಂಪುಟ ರಚನೆಯಾಗಿ ಹಲವು ದಿನಗಳೇ ಕಳೆದಿವೆ. ಎಲ್ಲರಿಗೂ ಖ್ಯಾತೆ ಕೂಡ ಹಂಚಿಕೆಯಾಗಿದೆ. ಆದರೆ ಸಚಿವ ಆನಂದ್ ಸಿಂಗ್ ಅವರಿಗೆ ಮಾತ್ರ ಖಾತೆ ಬಗ್ಗೆ ಅಸಮಾಧಾನ ಇನ್ನೂ ಕೂಡ ಶಮನವಾಗಿಲ್ಲ. ಸಚಿವ ಸ್ಥಾನದ ಆಕಾಂಕ್ಷೆಯಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವನ್ನು ಬಿಟ್ಟು ಬಿಜೆಪಿ ಸೇರಿದ್ದ ಆನಂದ್ ಸಿಂಗ್ ಹಾಗೂ ಎಂಟಿಬಿ ನಾಗರಾಜ್ ಪ್ರಬಲ ಖಾತೆಗಾಗಿ ಪಟ್ಟು ಹಿಡಿದಿದ್ದಾರೆ. ಇದಕ್ಕಾಗಿ ಹೈಕಮಾಂಡ್ ಭೇಟಿ ಮಾಡಲು ತೆರೆಮರೆ ಪ್ರಯತ್ನ ಮಾಡುತ್ತಿದ್ದಾರೆ.
ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ಪ್ರವಾಸೋದ್ಯಮ ಸಚಿವರಾಗಿರು ಆನಂದ್ ಸಿಂಗ್ ಇಂಧನ ಅಥವಾ ಲೋಕೋಪಯೋಗಿ ಇಲಾಖೆ ಮೇಲೆ ಕಣ್ಣಿಟ್ಟದ್ದರು. ಆದರೆ ಭಯಸಿದಂತೆ ಖಾತೆ ಸಿಗಲಿಲ್ಲ. ಹೀಗಾಗಿ ಆನಂದ್ ಸಿಂಗ್ ಅಸಮಧಾನಗೊಂಡಿದ್ದಾರೆ. ಇದಕ್ಕಾ ನೇರವಾಗಿ ಅಸಮಧಾನ ಹೊರಹಾಕಿದ್ದಾ ಆನಂದ್ ಸಿಂಗ್ ಕೋಪ ಶಮನ ಮಾಡಲು ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ ಕಸರತ್ತು ಮಾಡಿದ್ರು. ಖಾತೆ ಹಂಚಿಕೆ ಏನಿದ್ರೂ ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ಕೇಂದ್ರದತ್ತ ಬೆಟ್ಟು ತೋರಿಸಿದ್ದರು.
ಹೀಗಾಗಿ ಸದ್ಯ ರಹಸ್ಯವಾಗಿ ಆನಂದ್ ಸಿಂಗ್ ದೆಹಲಿಗೆ ತೆರಳಿದ್ದಾರೆನ್ನಲಾಗುತ್ತಿದೆ. ಅಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ಮೂಲಕ ಖಾತೆ ಪಡೆಯಲು ಸಿಂಗ್ ಕಸರತ್ತು ನಡೆಸಿದ್ದಾರೆ ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ಸಚಿವ ಆನಂದ್ ಸಿಂಗ್ ಕೋಪವನ್ನು ವರಿಷ್ಠರು ತಣ್ಣಗಾಗಿಸುತ್ತಾರಾ..? ಅಥವಾ ಕೈಬಿಡ್ತಾರಾ..? ಆನಂದ್ ಸಿಂಗ್ ಮುಂದಿನ ನಡೆ ಏನು? ಎನ್ನುವ ಬಗ್ಗೆ ಭಾರೀ ಕುತೂಹಲ ಉಂಟಾಗಿದೆ.