ಉತ್ತರಾಖಂಡದಲ್ಲಿ ಹಿಮಪಾತ : 5 ನೌಕಾ ಪರ್ವತಾರೋಹಿಗಳು ಕಾಣೆ..!
ಉತ್ತರಾಖಂಡದಲ್ಲಿ ಉಂಟಾದ ಹಿಮಪಾತದ ಬಳಿಕ 5 ನೌಕಾ ಪರ್ವತಾರೋಹಿಗಳು ಕಾಣೆಯಾಗಿದ್ದಾರೆ. ಉತ್ತರಾಖಂಡದ ಬಾಗೇಶ್ವರ ಜಿಲ್ಲೆಯ ತ್ರಿಶೂಲ್ ಶಿಖರವನ್ನು ತಲುಪುವಾಗ ಹಿಮಪಾತದಲ್ಲಿ ಸಿಲುಕಿ ನೌಕಾಪಡೆಯ ಐವರು ಪರ್ವತಾರೋಹಿಗಳು ಶುಕ್ರವಾರ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ನೌಕಾಪಡೆಯ 20 ಸದಸ್ಯರ ತಂಡ 15 ದಿನಗಳ ಹಿಂದೆ 7, 120 ಮೀಟರ್ ಪರ್ವತದ ತ್ರಿಶೂಲ್ ಪರ್ವತಕ್ಕೆ ಹೋಗಿತ್ತು. ಶುಕ್ರವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ಹಿಮಪಾತ ಸಂಭವಿಸಿದೆ. ಭಾರತೀಯ ನೌಕಾಪಡೆಯ ಸಾಹಸ ವಿಭಾಗ ಬೆಳಿಗ್ಗೆ 11 ಗಂಟೆ ಸುಮಾರಿಗೆ ಎನ್ಐಎಂ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಂಸ್ಥೆಯ ಶೋಧ ಮತ್ತು ರಕ್ಷಣಾ ತಂಡದ ಸಹಾಯವನ್ನು ಕೋರಿದೆ.
ತ್ರಿಶೂಲ ಎಂದರೆ ಶಿವನಿಗೆ ಸಂಬಂಧಿಸಿದ ಆಯುಧವಾದ ತ್ರಿಶೂಲ, ಇದು ಉತ್ತರಾಖಂಡದ ಬಾಗೇಶ್ವರ ಜಿಲ್ಲೆಯಲ್ಲಿರುವ ಮೂರು ಹಿಮಾಲಯ ಶಿಖರಗಳ ಒಂದು ಗುಂಪು. ಈ ಶಿಖರಗಳನ್ನು ತಪುಪಲು ಹಲವಾರು ಪ್ರವಾಸಿಗರು ಆಗಮಿಸುತ್ತಾರೆ.
ಉತ್ತರಕಾಶಿ ಮೂಲದ ನೆಹರು ಇನ್ಸ್ಟಿಟ್ಯೂಟ್ ಆಫ್ ಮೌಂಟೇನರಿಂಗ್ನ ಪಾರುಗಾಣಿಕಾ ತಂಡ ಕರ್ನಲ್ ಅಮಿತ್ ಬಿಶ್ತ್ ಅವರ ನೇತೃತ್ವದಲ್ಲಿ ಹಿಮಪಾತ ಪೀಡಿತ ಪ್ರದೇಶಕ್ಕೆ ತೆರಳಿ ಕಾಣೆಯಾದವರ ಶೋಧ ಕಾರ್ಯ ನಡೆದಿದೆ ಎಂದು ಎನ್ಐಎಂನ ಹೇಳಿದೆ.
ಐವರು ಪರ್ವತಾರೋಹಿಗಳ ತಂಡ ಜೋಶಿಮಠವನ್ನು ತಲುಪಿದೆ ಆದರೆ ಕೆಟ್ಟ ಹವಾಮಾನ ಅವರ ಮುನ್ನಡೆಗೆ ಅಡ್ಡಿಯಾಗುತ್ತಿದೆ. ಈ ವೇಳೆ ಅವರು ಕಾಣೆಯಾಗಿರುವ ಶಂಕೆ ಇದೆ.
ಭಾರತೀಯ ಸೇನೆ, ವಾಯುಪಡೆ ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್ಡಿಆರ್ಎಫ್) ಸಂಯೋಜಿತ ತಂಡ ಹೆಲಿಕಾಪ್ಟರ್ ನೆರವಿನಿಂದ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ.