ದೇವರ ಬದಲು ಕ್ಯಾಮೆರಾಕ್ಕೆ ಆರತಿ; ನೆಟ್ಟಿಗರಿಂದ ಸಿಎಂ ಆದಿತ್ಯಾನಾಥ್ ಟ್ರೋಲ್!
ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಆರತಿ ಮಾಡಿದ್ದ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಟೀಕೆ ಮತ್ತು ವ್ಯಂಗ್ಯಕ್ಕೆ ಒಳಗಾಗಿದೆ.
ವಿಡಿಯೋದಲ್ಲಿ ಆದಿತ್ಯನಾಥ್ ಅವರು ವಿಗ್ರಹದ ಬದಲು ಕ್ಯಾಮರಾ ನೋಡುತ್ತಲೇ ಆರತಿ ಎತ್ತಿರುವುದು ಕಂಡುಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ನಗೆಪಾಟಲಿಕೆಗೆ ಗುರಿಯಾಗಿದ್ದಾರೆ.
ಟ್ವಿಟರ್ ನಲ್ಲಿ ವೀಡಿಯೊ ಹಂಚಿಕೊಂಡ ಆದಿತ್ಯನಾಥ ಹಿಂದಿಯಲ್ಲಿ “ವಿಜಯದಶಮಿಯ ಶುಭ ಸಂದರ್ಭದಲ್ಲಿ ನಾನು ಇಂದು ಗೋರಖನಾಥ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದೆ. ಇದು ಕೆಡುಕಿನ ವಿರುದ್ಧದ ಸತ್ಯದ ವಿಜಯದ ಸ್ಮರಣೆಯ ಮಹಾನ್ ಹಬ್ಬವಾಗಿದೆ” ಎಂದು ಬರೆದುಕೊಂಡಿದ್ದಾರೆ.
ಈ ವೀಡಿಯೊವನ್ನು ಹಲವಾರು ಮಂದಿ ಬಳಕೆದಾರರು ವಿಭಿನ್ನ ತಲೆಬರಹಗಳನ್ನು ನೀಡಿ ಹಂಚಿಕೊಂಡಿದ್ದಾರೆ. “ಇವರು ಆರತಿ ಎತ್ತುತ್ತಿರುವುದು ದೇವರಿಗಲ್ಲ, ಕ್ಯಾಮರಾಕ್ಕೆ” ಎಂದು ಬಳಕೆದಾರರೋರ್ವರು ಟ್ವೀಟ್ ಮಾಡಿದ್ದಾರೆ.
https://twitter.com/Ravidevt/status/1449654981045354498?s=19
“ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಇಂದು ಆದಿತ್ಯನಾಥ್ ಕ್ಯಾಮರಾಗೆ ಆರತಿ ಎತ್ತಿದ್ದಾರೆ” ಎಂದು ಇನ್ನೋರ್ವರು ವ್ಯಂಗ್ಯವಾಡಿದ್ದಾರೆ.
Yogi…
Aarti for the social media … not for the lord…
Calls himself a Yogi …. aur Aarti mey bei drama#ModiSavingFarmerKillers pic.twitter.com/EL6dorckIH
— John (@SupreemJohn) October 17, 2021