ಉದ್ಯೋಗ ಕೇಳಿದ್ದಕ್ಕೆ ಜನರ ಮೇಲೆ ಲಾಠಿಚಾರ್ಜ್; ಬಿಜೆಪಿ ಮತಯಾಚನೆಗೆ ಬಂದಾಗ ಇದನ್ನು ನೆನಪಿಸಿಕೊಳ್ಳಿ: ರಾಹುಲ್ಗಾಂಧಿ
ಉದ್ಯೋಗ ಸೃಷ್ಟಿ ಮತ್ತು ಉದ್ಯೋಗ ಖಾತ್ರಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ಯುವಜನರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿರುವ ಘಟನೆ ಉತ್ತರ ಪ್ರದೇಶದ ಲಖನೌನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಈ ವಿಚಾರವಾಗಿ ಬಿಜೆಪಿ ವಿರುದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಘಟನೆಗೆ ಸಂಭದಿಸಿದ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಅವರು, ಉತ್ತರ ಪ್ರದೇಶ ಸರ್ಕಾರ ಉದ್ಯೋಗ ಕೇಳಿದವರ ಮೇಲೆ ಲಾಠಿ ಚಾರ್ಜ್ ನಡೆಸಿದೆ. ಬಿಜೆಪಿ ಮತಯಾಚನೆಗೆ ಬಂದಾಗ ಈ ಘಟನೆಯನ್ನು ಜನರು ನೆನಪಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
2019ರ ಉತ್ತರ ಪ್ರದೇಶ ಶಿಕ್ಷಕರ ಅರ್ಹತಾ ಪರೀಕ್ಷೆ ನ್ಯಾಯಯುತವಾಗಿ ನಡೆದಿಲ್ಲ ಎಂದು ಆರೋಪಿಸಿರುವ ಯುವಜನರು ಶನಿವಾರ ಸಂಜೆ ಲಖನೌನಲ್ಲಿ ಮೇಣದಬತ್ತಿ ಹಿಡಿದು ಶಾಂತಿಯುವ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ, ಪ್ರತಿಭಟನಾನಿರತ ಯುವಜನರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ ಎಂದು ವರದಿಯಾಗಿದೆ.
रोज़गार माँगने वालों को #UP सरकार ने लाठियाँ दीं-
जब भाजपा वोट माँगने आए तो याद रखना! pic.twitter.com/ZZGg9thd7n— Rahul Gandhi (@RahulGandhi) December 5, 2021
‘ಉದ್ಯೋಗಕ್ಕಾಗಿ ಎದಿರು ನೋಡುತ್ತಿರುವ ಜನರ ಮೇಲೆ ಉತ್ತರ ಪ್ರದೇಶ ಸರ್ಕಾರ ಲಾಠಿಯಿಂದ ಹಲ್ಲೆ ನಡೆಸಿದೆ. ಇದನ್ನು ಬಿಜೆಪಿ ಮತಯಾಚನೆಗೆ ಬಂದಾಗ ಜನರು ನೆನಪಿಸಿಕೊಳ್ಳಬೇಕು’ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಪೂರ್ವ ಭಾಗದಲ್ಲಿ ಜವಾದ್ ಚಂಡಮಾರುತದ ಅಬ್ಬರ; ರಾಜ್ಯದ 21 ಜಿಲ್ಲೆಗಳಲ್ಲಿ ಮತ್ತೆ ಮಳೆ!