ಫ್ಯಾಕ್ಟ್ಚೆಕ್: ಭಾರತ ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್ BJP ಸಭೆಯಲ್ಲಿ ಭಾಗವಹಿಸುವುದಿಲ್ಲ
ಭಾರತದ ಮಾಜಿ ಕ್ರಿಕೆಟಿಗ, ಹಾಗೂ ಭಾರತ ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರು BJPಯ ಸಭೆಯೊಂದರಲ್ಲಿ ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಇದೇ 12 ರಿಂದ 15ರ ವರೆಗೆ ಬಿಜೆಪಿಯ ಯುವ ಮೋರ್ಚಾದ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ದ್ರಾವಿಡ್ ಅವರು ಭಾಗಿ ಆಗಲಿದ್ದಾರೆ ಎಂದು ಬಿಜೆಪಿ ಶಾಸಕ ವಿಶಾಲ್ ನಹೇರಿಯಾ ಅವರು ಹೇಳಿಕೆ ನೀಡಿದ್ದರು. ಬಳಿಕ ದ್ರಾವಿಡ್ ಅವರು ಬಿಜೆಪಿಯ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬ ಸುದ್ದಿಯನ್ನು ಹಲವು ಮಾಧ್ಯಮಗಳು ವರದಿ ಮಾಡಿದ್ದವು.
इसमें भारतीय किक्रेटर राहुल द्रविड भी शामिल होंगे। उनकी सफलता को लेकर युवाओं में एक संदेश दिया जाएगा कि राजनीति ही नहीं अन्य क्षेत्रों में भी हम आगे बढ़ सकते हैं: विशाल नहेरिया, विधायक, धर्मशाला, हिमाचल प्रदेश (9.5)
— ANI_HindiNews (@AHindinews) May 10, 2022
India's head coach Rahul Dravid to participate in BJP event in Himachal
Read @ANI Story | https://t.co/lc6h5rRebq#RahulDravid #BJP #HimachalPradesh pic.twitter.com/zDDojdkw58
— ANI Digital (@ani_digital) May 10, 2022
ಇಂದಿನಿಂದ ಮೂರು ದಿನಗಳ ಕಾಲ ಅಂದರೆ ಮೇ 12 ರಿಂದ ಮೇ 15 ರ ವರಗೆ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಬಿಜೆಪಿಯ ಯುವ ಮೋರ್ಚಾದ ಸಭೆ ಆಯೋಜನೆ ಆಗಿದೆ. ಈ ಸಭೆಯಲ್ಲಿ ದ್ರಾವಿಡ್ ಅವರು ಭಾಗಿ ಆಗಲಿದ್ದಾರೆ ಎಂದು ಬಿಜೆಪಿ ಶಾಸಕ ವಿಶಾಲ್ ನಹೆರಿಯ ಅವರು ANI ಗೆ ಹೇಳಿಕೆ ನೀಡಿದ್ದರು. ಹಾಗಿದ್ದರೆ BJP ಯುವ ಮೋರ್ಚಾ ಸಭೆಯಲ್ಲಿ ರಾಹುಲ್ ಡ್ರಾವಿಡ್ ಭಾಗವಹಿಸುತ್ತಿರುವ ಸುದ್ದಿಯ ಸತ್ಯಾಸತ್ಯೆತೆಗಳನ್ನು ಪರಿಶೀಲಿಸೋಣ.
ಏನ್ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others
ಫ್ಯಾಕ್ಟ್ಚೆಕ್:
ಮೇ 12 ರಿಂದ ಮೇ 15 ರ ನಡುವಿನ ಬಿಜೆಪಿ ಯುವ ಮೋರ್ಚಾ ಸಭೆಯಲ್ಲಿ ಭಾರತದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಕೂಡ ಭಾಗವಹಿಸಲಿದ್ದಾರೆ ಎಂದು ಹಿಮಾಚಲದ ಧರ್ಮಶಾಲಾದ ಬಿಜೆಪಿ ಶಾಸಕ ವಿಶಾಲ್ ನಹೇರಿಯಾ ಸುದ್ದಿ ಸಂಸ್ಥೆಗೆ ಹೇಳಿಕೆ ನೀಡಿದ ನಂತರ ಅವರ ಹೇಳಿಕೆಗೆ ಸಂಬಂಧಿಸಿದಂತೆ ಸ್ವತಃ ರಾಹುಲ್ ಡ್ರಾವಿಡ್ ANI ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ಶಾಸಕ ವಿಶಾಲ್ ನಹೇರಿಯಾ ಹೇಳಿಕೆ:
“ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯು ಮೇ 12 ರಿಂದ 15 ರವರೆಗೆ ಧರ್ಮಶಾಲಾದಲ್ಲಿ ನಡೆಯಲಿದೆ. ಬಿಜೆಪಿಯ ರಾಷ್ಟ್ರೀಯ ನಾಯಕತ್ವ ಮತ್ತು ಹಿಮಾಚಲ ಪ್ರದೇಶದ ನಾಯಕತ್ವವು ಭಾಗಿಯಾಗಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಸಚಿವರು ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ.
ರಾಹುಲ್ ದ್ರಾವಿಡ್ ಕೂಡ ಈ ಸಭೆಗೆ ಭಾಗವಹಿಸುತ್ತಿದ್ದು” ರಾಜಕೀಯದಲ್ಲಿ ಮಾತ್ರವಲ್ಲದೆ ಕ್ರೀಡೆಯಂತಹ ಇತರ ಕ್ಷೇತ್ರಗಳಲ್ಲಿಯೂ ಯುವಕರು ಮುಂದುವರಿಯಬಹುದು” ಎಂಬ ಸಂದೇಶವನ್ನು ಯುವಕರಿಗೆ ನೀಡಲಾಗುವುದು ಎಂದು ವಿಶಾಲ್ ನಹೇರಿಯಾ ANIಗೆ ಹೇಳಿದ್ದರು.
ರಾಹುಲ್ ದ್ರಾವಿಡ್ ಹೇಳಿದ್ದೇನು?
ಈ ಸುದ್ದಿಯನ್ನು ರಾಹುಲ್ ದ್ರಾವಿಡ್ ಅವರು ಅಲ್ಲಗಳೆದಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ‘ಬಿಜೆಪಿ ಆಯೋಜಿಸಿರುವ ಸಭೆಯಲ್ಲಿ ನಾನು ಪಾಲ್ಗೊಳ್ಳಲಿದ್ದೇನೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಈ ವರದಿಗಳು ನಿಜವಲ್ಲ. ನಾನು ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ’ ಎಂದು ದ್ರಾವಿಡ್ ಅವರು ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ ಎಂದು ಎಎನ್ಐ ಟ್ವೀಟ್ ಮಾಡಿದೆ.
"A section of the media has reported that I will attend a meeting in Himachal Pradesh from May 12th-15th, 2022. I wish to clarify that the said report is incorrect": Rahul Dravid, Team India Head coach to ANI pic.twitter.com/wIjxdAygBt
— Rahul Dravid (@rahuldravid_ind) May 10, 2022
ANI ಗೆ, 2022 ರ ಮೇ 12 ರಿಂದ 15 ರವರೆಗೆ ಹಿಮಾಚಲ ಪ್ರದೇಶದಲ್ಲಿ ನಡೆಯುವ ಸಭೆಯಲ್ಲಿ ನಾನು ಭಾಗವಹಿಸುತ್ತೇನೆ ಎಂದು ಮಾಧ್ಯಮದ ಒಂದು ವಿಭಾಗ ವರದಿ ಮಾಡಿದೆ. ಈ ವರದಿಯು ತಪ್ಪಾಗಿದೆ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ, ರಾಹುಲ್ ದ್ರಾವಿಡ್, ಟೀಮ್ ಇಂಡಿಯಾ ಮುಖ್ಯ ಕೋಚ್.
A section of the media has reported that I will attend a meeting in Himachal Pradesh from May 12th-15th, 2022. I wish to clarify that the said report is incorrect: Rahul Dravid, Team India Head coach to ANI
(File photo) pic.twitter.com/b7Uifnaj1J
— ANI (@ANI) May 10, 2022
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೂಡ ಈ ಸುದ್ದಿ ವರದಿಗಳನ್ನು ನಿರಾಕರಿಸಿದೆ. ಹಿಂದೂಸ್ತಾನ್ ಟೈಮ್ಸ್ನೊಂದಿಗೆ ಮಾತನಾಡಿದ ಬಿಸಿಸಿಐ ಮಾಧ್ಯಮ ವ್ಯವಸ್ಥಾಪಕ ಮೌಲಿನ್ ಪಾರಿಖ್, ಮಾಧ್ಯಮಗಳಲ್ಲಿ ದ್ರಾವಿಡ್ BJP ಸಭೆಯಲ್ಲಿ ಭಾಗವಹಿಸುತ್ತಾರೆ ಎಂದು ಹಬ್ಬಿರುವ ಕಥೆಯನ್ನು ‘ಸುಳ್ಳು ಮತ್ತು ತಪ್ಪು’ ಎಂದು ಹೇಳಲು ಕೇಳಿದ್ದಾರೆ ಎಂದು ಮೌಲಿನ್ ಪಾರಿಖ್ ಹಿಂದೂಸ್ತಾನ್ ಟೈಮ್ಸ್ಗೆ ಮಾಹಿತಿ ನೀಡಿದ್ದಾರೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.
ಇದನ್ನು ಓದಿರಿ: ಫ್ಯಾಕ್ಟ್ಚೆಕ್: ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಬಿಜೆಪಿ ತನ್ನ ಘಟಕವನ್ನು ತೆರೆದಿದೆಯೇ?