FACT CHECK | ಲಿಂಗಾಯತರ ಹೆಸರಿನಲ್ಲಿ ಚರ್ಚ್ವೊಂದನ್ನು ಸ್ಥಾಪಿಸಿಲಾಗಿದೆಯೇ? ಈ ಸ್ಟೋರಿ ಓದಿ
ಸಾಮಾಜಿಕ ಮಧ್ಯಮಗಳಲ್ಲಿ ಕೆಲವು ಬಲಪಂಥೀಯ ಸಿದ್ದಾಂತದ ಬೆಂಬಲಿಗರು ಅಲ್ಪಸಂಖ್ಯಾತರನ್ನು (ಮುಸ್ಲಿಮರನ್ನು) ಗುರಿಯಾಗಿಸಿಕೊಂಡು ಕೋಮು ಪ್ರಚೋದನೆಯ, ದ್ವೇಷಪೂರಿತ ಪೋಸ್ಟ್ಗಳನ್ನು ಹಂಚಿಕೊಳ್ಳುವುದನ್ನು ಈಗಾಗಲೇ ಗಮನಿಸಿದ್ದೇವೆ. ಈಗ ಕ್ರೈಸ್ತರಿಗೆ ಸಂಬಂಧಿಸಿದ ಕೋಮು ದ್ವೇಷದ ಪೋಸ್ಟ್ಅನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ವೈರಲ್ ಪೋಸ್ಟ್ನಲ್ಲಿ ಏನಿದೆ ಎಂದು ನೋಡೋಣ.
“ನಮ್ಮ ಕರ್ಮ ಕ್ರೈಸ್ತರು ಈ ರೀತಿ ಹಿಂದೂ ಧರ್ಮದ ಎಲ್ಲಾ ಜಾತಿಗಳನ್ನು ಬಳಕೆ ಮಾಡಿಕೊಂಡು ಅವರ ಧರ್ಮಕ್ಕೆ ಸೇರಿಸಿಕೊಳ್ಳುತ್ತಿದ್ದರೆ. ಏನು ಮಾಡುವುದು ಎಂಬ ಬರಹದೊಂದಿಗೆ ಫೇಸ್ಬುಕ್ನಲ್ಲಿ ಪೋಸ್ಟ್ವೊಂದನ್ನು ಹಂಚಿಕೊಳ್ಳಲಾಗಿದೆ.
ಬಲಪಂಥೀಯ ಪ್ರತಿಪಾದಕ ಫೇಸ್ಬುಕ್ ಪೇಜ್ನಲ್ಲಿ ಇದೇ ಹೇಳಿಕೆಯ ಮೂಲಕ ಪೋಸ್ಟ್ಅನ್ನು ಹಂಚಿಕೊಂಡಿದ್ದು ” ನಮ್ಮ ಕರ್ಮ ಕ್ರೈಸ್ತರು ಈ ರೀತಿ ಹಿಂದೂ ಧರ್ಮದ ಎಲ್ಲಾ ಜಾತಿಗಳನ್ನು ಬಳಕೆ ಮಾಡಿಕೊಂಡು ಅವರ ಧರ್ಮಕ್ಕೆ ಸೇರಿಸಿಕೊಳ್ಳುತ್ತಿದ್ದರೆ. ಏನು ಹೇಳೋದು ಸ್ವಾಮಿ, ಅಲ್ಪ ಸಂಖ್ಯಾತರ ಬಾಧೆ ಒಂದು ಕಡೆ ಆದರೆ ಇವರು ಶಾಂತಿಯುತವಾಗಿ ಹರಡಿಕೊಳ್ಳಲು ಎಲ್ಲಾ ರೀತಿಯ ದಾರಿಗಳನ್ನು ನಿಧಾನವಾಗಿ ನಿಶ್ಯಬ್ದವಾಗಿ ನಡೆಸುತ್ತಿದ್ದಾರೆ” ಎಂದು Maithri Gowdaಎಂಬ ಬಳಕೆದಾರರು ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ.
ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ‘ಬ್ಯೂಟಿಫುಲ್ ಇಂಡಿಯನ್ ಚರ್ಚುಗಳು’ ಎಂಬ ಬ್ಲಾಗ್ ಒಂದರಲ್ಲಿ ಇದೇ ಚಿತ್ರವು ಲಭ್ಯವಾಗಿದೆ.
ವೈರಲ್ ಪೋಸ್ಟ್ನಲ್ಲಿ ಏಪ್ರಿಲ್ 2018 ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಲಾದ ‘ಲಿಂಗಾಯತ ಕ್ಯಾಥೋಲಿಕ್ ಚರ್ಚ್’ ಎಂದು ಹಂಚಿಕೊಳ್ಳಲಾಗುತ್ತಿರುವ ಚಿತ್ರವು ವಾಸ್ತವವಾಗಿ ಮಹಾರಾಷ್ಟ್ರದ ಪಶ್ಚಿಮ ಭಾಗದಲ್ಲಿರುವ ಥಾಣೆ ಜಿಲ್ಲೆಯ ಕರಾವಳಿ ಪಟ್ಟಣವಾದ ದಹಾನುದಲ್ಲಿನ ಚರ್ಚ್ ಆಗಿದೆ. ಬ್ಲಾಗರ್ ದಹಾನುಗೆ ಭೇಟಿ ನೀಡಿದ ಸಂದರ್ಭದಲ್ಲಿ ಚಿತ್ರವನ್ನು ಕ್ಲಿಕ್ ಮಾಡಿ ಬ್ಲಾಗ್ನಲ್ಲಿ ಪೋಸ್ಟ್ ಮಾಡಿದ್ದರು. ಬ್ಲಾಗ್ ಪೋಸ್ಟ್ ದಿನಾಂಕ ಏಪ್ರಿಲ್ 14, 2012. ಮೂಲ ಚಿತ್ರವನ್ನು ಕೆಳಗೆ ನೋಡಬಹುದು.
‘ಅವರ್ ಲೇಡಿ ಆಫ್ ಡೋಲೌರ್ಸ್ ಚರ್ಚ್’ ಎಂದು ಬರೆದಿರುವ ‘ಲಿಂಗಾಯತ ಕ್ಯಾಥೋಲಿಕ್ ಚರ್ಚ್’ ಎಂದು ಎಡಿಟ್ ಮಾಡಲಾಗಿದೆ. ದುಖಿ ಮಾತಾ ಚರ್ಚ್, ದಹಾನು ಎಂದು ಬರದಿರುವುದನ್ನು ನೋಡಬಹುದು.
ದಹಾನು, ಮಹಾರಾಷ್ಟ್ರದ ಚರ್ಚ್ನ ಚಿತ್ರವನ್ನು ಫೋಟೊಶಾಪ್ ಮಾಡಿ ಬೆಂಗಳೂರಿನಲ್ಲಿ ಹೊಸದಾಗಿ ಸ್ಥಾಪಿಸಲಾದ ಲಿಂಗಾಯತ ಸಮುದಾಯಕ್ಕೆ ಸೇರಿದ ಚರ್ಚ್ ಎಂದು ಬಿಂಬಿಸಲಾಗಿದೆ.
ಇದನ್ನು 2018ರಲ್ಲಿ ನಡೆದ ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾನಮಾನ ಹೋರಾಟವನ್ನು ಟೀಕಿಸುವ ಸಲುವಾಗಿ, ಗ್ಲೋಬಲ್ ಕ್ರಿಶ್ಚಿಯನ್ ಆರ್ಗನೈಸೇಶನ್ ಮತ್ತು ವರ್ಲ್ಡ್ ಇಸ್ಲಾಮಿಕ್ ಆರ್ಗನೈಸೇಶನ್ ಸಹಾಯದಿಂದ ಲಿಂಗಾಯತ ಸಮಸ್ಯೆಯನ್ನು ರೂಪಿಸಲಾಗಿದೆ ಎಂದು ಆರೋಪಿಸಿ ಕರ್ನಾಟಕದ ಸಚಿವ ಎಂ.ಬಿ.ಪಾಟೀಲ್ ಅವರು ಸೋನಿಯಾ ಗಾಂಧಿ ಅವರಿಗೆ ಬರೆದಿರುವ ನಕಲಿ ಪತ್ರವನ್ನು ನಕಲಿ ಸುದ್ದಿ ವೆಬ್ಸೈಟ್ ಒಂದನ್ನು ಪೋಸ್ಟ್ಕಾರ್ಡ್ ನ್ಯೂಸ್ ಪ್ರಸಾರ ಮಾಡಿತ್ತು. ಅದರೆ ಪತ್ರದಲ್ಲಿ ಉಲ್ಲೇಖಿಸಲಾದ ಎರಡು ಸಂಸ್ಥೆಗಳಲ್ಲಿ ಯಾವುದೂ ಅಸ್ತಿತ್ವದಲ್ಲಿಲ್ಲ. ಈ ಹಿಂದೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಸೇರಿದಂತೆ ಹಲವರು ಲಿಂಗಾಯತ ವಿಚಾರದಲ್ಲಿ ಚರ್ಚ್ ಭಾಗಿಯಾಗಿರುವ ಬಗ್ಗೆ ನಕಲಿ ಇಮೇಲ್ ಅನ್ನು ಹಂಚಿಕೊಂಡಿದ್ದರು. ಇದನ್ನು 2018ರಲ್ಲಿ ಆಲ್ಟ್ನ್ಯೂಸ್ ವರದಿ ಮಾಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ದಹಾನು, ಮಹಾರಾಷ್ಟ್ರದ ಚರ್ಚ್ನ ಚಿತ್ರವನ್ನು ಫೋಟೊಶಾಪ್ ಮಾಡಿ ಬೆಂಗಳೂರಿನಲ್ಲಿ ಹೊಸದಾಗಿ ಸ್ಥಾಪಿಸಲಾದ ಲಿಂಗಾಯತ ಕ್ಯಾಥೋಲಿಕ್ ಚರ್ಚ್ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಕಾನ್ಸ್ ಗ್ರ್ಯಾಂಡ್ ಪ್ರಿಕ್ಸ್ ವಿಜೇತೆ ಪಾಯಲ್ ಕಪಾಡಿಯಾ ಹೆಸರಿನಲ್ಲಿ ಸೃಷ್ಟಿಯಾಗಿವೆ ಎಕ್ಸ್ ನಕಲಿ ಖಾತೆಗಳು