FACT CHECK | ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಸಿಗರೇಟ್‌ ಹಿಡಿದಿರುವಂತೆ ಚಿತ್ರವನ್ನು ಎಡಿಟ್‌ ಮಾಡಿ ಹಂಚಿಕೆ

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸಿಗರೇಟ್ ಹಿಡಿದಿರುವ ಕಪ್ಪು-ಬಿಳುಪಿನ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಫೇಸ್‌ಬುಕ್ ಬಳಕೆದಾರ ಸರ್ವೇಶ್ ಕುಟ್ಲೆಹ್ರಿಯಾ ಜುಲೈ 12 ರಂದು ಹಿಂದಿ ಬರಹದೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದು, “ಇದನ್ನು ಗುರುತಿಸುವ ವ್ಯಕ್ತಿಗೆ 8500 ಖಾತಾ ಖಟ್ ಟಕಾ ತಕ್ ಸಿಗುತ್ತದೆ” ಎಂದು ಬರೆದಿದ್ದಾರೆ. ಈ ಪೋಸ್ಟ್‌ಗೆ 20,000 ಕ್ಕೂ ಹೆಚ್ಚು ಲೈಕ್‌ಗಳು ಮತ್ತು 5,900 ಶೇರ್‌ಗಳು ಬಂದಿವೆ.

 

 

 

 

 

 

 

 

 

 

 

 

 

 

 

 

 

 

ಫೇಸ್‌ಬುಕ್ ಮತ್ತು ಎಕ್ಸ್‌ನಲ್ಲಿ ಹಲವಾರು ಇತರ ಬಳಕೆದಾರರು ಅದೇ ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ. ಕೆಲವು ಉದಾಹರಣೆಗಳು ಈ ಕೆಳಗಿನಂತಿವೆ.

ವೈರಲ್ ಚಿತ್ರವನ್ನು ಸೂಕ್ಷಮಾಗಿ ಪರಿಶೀಲಿಸದಾಗ, ಫೋಟೊದ ಎಡ ಕೆಳಭಾಗದ ಮೂಲೆಯಲ್ಲಿ “ರೀಮೇಕರ್” ಎಂಬ ವಾಟರ್ ಮಾರ್ಕ್ ಇರುವುದನ್ನು ನೋಡಬಹುದು. ಚಿತ್ರದ ಗೂಗಲ್ ಸರ್ಚ್ ಮಾಡಿದಾಗ, ರೀಮೇಕರ್ ಎಐ(AI) ನಿಂದ ರಚಿಸುವ ಸೃಜನಾತ್ಮಕ ಜನರೇಟರ್ ಎಂಬ ಮಾಹಿತಿ ಲಭ್ಯವಾಗಿದೆ.

ಈ ತಂತ್ರಜ್ಞಾನ ಬಳಸಿಕೊಂದು ಬಳಕೆದಾರರು ಚಿತ್ರಗಳು ಮತ್ತು ವಿಡಿಯೋಗಳ ಮುಖಗಳನ್ನು ಬದಲಾಯಿಸಲು ಅನುವು ಮಾಡಿಕೊಡುತ್ತದೆ, ಮೂಲ ವಿಷಯದಲ್ಲಿರುವ ವ್ಯಕ್ತಿಯ ಮುಖವನ್ನು ಬೇರೊಬ್ಬರ ಮುಖದೊಂದಿಗೆ ಬದಲಾಯಿಸಲು ಸಾಧ್ಯವಾಗುತ್ತದೆ. ವೈರಲ್ ಚಿತ್ರವು ಮೂಲ ಚಿತ್ರದ ಎಡಿಟೆಡ್ ಆವೃತ್ತಿಯಾಗಿದೆ ಎಂದು ಇದು ಸೂಚಿಸುತ್ತದೆ.

ಈ ಮಾಹಿತಿಯ ಆಧಾರದಲ್ಲಿ ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಇದು ಫೆಬ್ರವರಿ 2013 ರಲ್ಲಿ ಮೈಕ್ರೋಬ್ಲಾಗಿಂಗ್ ವೆಬ್ಸೈಟ್ ಥಂಬ್ಲರ್ನಿಂದ ಹಂಚಿಕೊಂಡ ಪೋಸ್ಟ್‌ವೊಂದು ಲಭ್ಯವಾಗಿದೆ. ಈ ಪೋಸ್ಟ್‌ನಲ್ಲಿ ವೈರಲ್ ಚಿತ್ರದಂತೆಯೇ ಹೋಲುವ ಚಿತ್ರವಿದ್ದು, ಆದರೆ ಚಿತ್ರದಲ್ಲಿರುವ ಮಹಿಳೆ ಸೋನಿಯಾ ಗಾಂಧಿ ಆಗಿರದೆ ಬೇರೊಬ್ಬರಾಗಿದ್ದಾರೆ. ಚಿತ್ರದ ಕೆಳಗೆ, “ಫರ್ಜಾದ್ ಸರ್ಫರಾಜಿ ತೆಗೆದ ಗಜಲೆ ಛಾಯಾಚಿತ್ರ, 2012” ಎಂದು ಶೀರ್ಷಿಕೆ ನೀಡಲಾಗಿದೆ.

ಈ ಚಿತ್ರದ ಕೆಳಗಿನ ಬಲ ಮೂಲೆಯಲ್ಲಿ, ಉಲ್ಲೇಖಿಸಿದ ಛಾಯಾಗ್ರಾಹಕನ ಕೃತಿಸ್ವಾಮ್ಯ ಗುರುತನ್ನು ಸಹ ಕಾಣಬಹುದು.

 

 

 

 

 

 

 

 

 

 

 

 

 

 

 

 

ಇನ್ನೂ ಹಲವರು ಈ ಚಿತ್ರವನ್ನು ಹಲವಾರು ಸಂದರ್ಭಗಳಲ್ಲಿ ಹಂಚಿಕೊಂಡಿದ್ದು, ಮೂಲ ಚಿತ್ರವನ್ನು ಫರ್ಜಾದ್ ಸರ್ಫರಾಜಿ ಎಂಬುವವರು ರಚಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ಚಿತ್ರವನ್ನು ರೀಮೇಕರ್ ಬಳಸಿ ರಚಿಸಲಾಗಿದೆ. ಮೂಲ ಚಿತ್ರದಲ್ಲಿನ ಮಹಿಳೆಯ ಮುಖವನ್ನು ಸೋನಿಯಾ ಗಾಂಧಿ ಅವರ ಚಿತ್ರದೊಂದಿಗೆ ಬದಲಾಯಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಸ್ಮೃತಿ ಇರಾನಿ ಸೋಲಿನ ಕುರಿತು ಕಾಂಗ್ರೆಸ್‌ ಕಾರ್ಯಕರ್ತರು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡುತ್ತಿದ್ದರು. ಈ ಕುರಿತು ರಾಹುಲ್ ಗಾಂಧಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ವಿರುದ್ಧ ಸೋತಿರುವ ಬಿಜೆಪಿ ನಾಯಕಿ ಸ್ಮೃತಿ ಇರಾನಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡದಂತೆ, ವಿಪಕ್ಷ ನಾಯಕ ರಾಹುಲ್ ಗಾಂಧಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ. 

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಅನಂತ್ ಮತ್ತು ರಾಧಿಕಾ ಮದುವೆಯಲ್ಲಿ ಸಲ್ಮಾನ್ ಖಾನ್ ಐಶ್ವರ್ಯಾ ರೈ ಜೊತೆ ಫೋಟೊ ವೈರಲ್! ಫೋಟೊದ ಅಸಲೀಯತ್ತೇನು ಗೊತ್ತೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights