ರಾತ್ರಿ ಸುರಿದ ಭಾರಿ ಮಳೆಗೆ ನಲುಗಿದ ಮಾನವಿ ಪಟ್ಟಣ…..!
ಭಾರಿ ಮಳೆಗೆ ರಾಯಚೂರು ಜಿಲ್ಲೆಯ ಮಾನವಿ ಪಟ್ಟಣ ನಲುಗಿ ಹೋಗಿದೆ.
ಹೌದು.. ರಾತ್ರಿ ಸುಮಾರು ೪ ತಾಸು ಎಡಬಿಡದ ಮಳೆ ಸುರಿದಿದ್ದು ತಗ್ಗು ಪ್ರದೇಶದ ಮನೆಗಳಲ್ಲಿ ಹಾಗೂ ಶಾಲೆಗಳಲ್ಲಿ ನೀರು ಹೊಕ್ಕಿದೆ. ಹಲವು ಮನೆಯೊಳಗೆ ನೀರು ನುಗ್ಗಿ ಜನ ಜೀವನ ಅಸ್ಥವ್ಯಸ್ತಗೊಂಡಿದೆ. ಶಾಲಾ ಆವರಣದಲ್ಲಿಯೂ ಮಳೆ ನೀರು ನುಗ್ಗಿ ಶಾಲೆಗೆ ಬರುವ ಮಕ್ಕಳು ಪರದಾಡುವಂತಾಗಿದೆ.
ಅಷ್ಟೇ ಅಲ್ಲದೇ ಐಬಿ ಬಳಿ ಇರುವ ಅಂಬೇಡ್ಕರ್ ವಿದ್ಯಾರ್ಥಿ ನಿಲಯದಲ್ಲಿಯೂ ಮಳೆ ನೀರು ನುಗ್ಗಿದೆ. ಈಗ ಮಳೆ ನಿಂತರೂ ಮಾನವಿ ಪಟ್ಟಣದ ತಗ್ಗು ಪ್ರದೇಶದಲ್ಲಿನ ಮಳೆ ನೀರನ್ನು ಹೊರಹಾಕಲು ಜನ ಹರಸಾಹಸ ಪಡುತ್ತಿದ್ದಾರೆ.