ನರಳುತ್ತಿದ್ದ ನರಿಯೊಂದಕ್ಕೆ ನೀರು ಕುಡಿಸಿ ಮಾನವೀಯತೆ ಮೆರೆದ ಸ್ವಾಮೀಜಿಗಳು…
ಅಪಘಾತದಲ್ಲಿ ಪೆಟ್ಟು ಬಿದ್ದು ನರಳುತ್ತಿದ್ದ ನರಿಯೊಂದಕ್ಕೆ ಸ್ವಾಮೀಜಿಗಳು ನೀರು ಕುಡಿಸಿ ಮಾನವೀಯತೆ ಮೆರೆದಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಚಿತ್ರದುರ್ಗದಿಂದ ಹೊಳಲ್ಕೆರೆ ಗೆ ತೆರಳುತ್ತಿದ್ದ ಮಾರ್ಗದಲ್ಲಿ ಕನಕ ಪೀಠದ ನಿರಂಜನಾನಂದ ಪುರಿ ಸ್ವಾಮಿಜಿ , ಭೋವಿ ಪೀಠದ ಇಮ್ಮಡಿ ಸಿದ್ದ ರಾಮೇಶ್ವರ ಸ್ವಾಮೀಜಿಗಳು ಹೊಳಲ್ಕೆರೆ ಒಂಟಿ ಕಂಬದ ಮಠಕ್ಕೆ ತೆರಳುತ್ತಿದ್ದ ನರಿ ನರಳುತ್ತಿದ್ದನ್ನ ಗಮನಿಸಿದ್ದಾರೆ.
ಕಾರು ನಿಲ್ಲಿಸಿ ಇಳಿದು ನೋಡಿದಾಗ ರಸ್ತೆ ದಾಟುವಾಗ ಲಾರಿಯೊಂದು ಡಿಕ್ಕಿಯಾದ ಪರಿಣಾಮ ನರಿ ನರಳಾಡುತ್ತಿದ್ದ ತಿಳಿದು ಕೂಡಲೇ ನರಿಗೆ ನೀರು ಕುಡಿಸಿ ಆರೈಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ.ಬಳಿಕ ಆರೈಕೆಯಿಂದ ಚೇತರಿಸಿಕೊಂಡ ನರಿ ತನ್ನಷ್ಟಕ್ಕೆ ತಾನು ಅರಣ್ಯ ಪ್ರದೇಶದಕಡೆಗೆ ಹೋಗಿದೆ ಎಂದು ಸ್ವಾಮೀಜಿಗಳು ತಿಳಿಸಿದ್ದಾರೆ.