ಭ್ರಷ್ಟಾಚಾರಿ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕಿತ್ತೊಗೆಯಿರಿ: ಶಂಕರ್ ಬಿದರಿ
ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಜೈಲು ಸೇರಿ ಹೊರಬಂದಿರುವ ಯಡಿಯೂರಪ್ಪ ಅವರಿಂದ ಪಕ್ಷದ ಮೇಲಿನ ಗೌರವ ಹಾಳಾಗುತ್ತಿದೆ. ಭ್ರಷ್ಟಾಚಾರಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿರುವುದು ಏಕೆ? ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಿಎಸ್ವೈ ಅವರನ್ನು ಪಕ್ಷದಿಂದ ವಜಾಗೊಳಿಸಿ ಎಂದು ಮಾಜಿ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ಹೇಳಿದ್ದಾರೆ.
ಇತ್ತೀಚೆಗೆ ಬಿಎಸ್ವೈ ಪುತ್ರ ವಿಜಯೇಂದ್ರ ಅವರು 5,000 ಕೋಟಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಬಿಜೆಪಿ ನಾಯಕರೇ ಆರೋಪಿಸಿದ್ದರು. ಈ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆ ಬಗ್ಗೆ ಉಲ್ಲೇಖಿಸಿರುವ ಶಂಕರ್ ಬಿದರಿ ಅವರು, ಯಡಿಯೂರಪ್ಪ ಕುಟುಂಬದ ಬಗ್ಗೆ ಭ್ರಷ್ಟಾಚಾರದ ವರದಿಗಳು ಸುದ್ದಿಯಾಗಿವೆ. ಇದು, ಐಟಿ, ಇಡಿ ಮತ್ತು ಪಕ್ಷದವರಿಗೆ ಗೊತ್ತಿಲ್ಲವಾ, ಅವರ ಗಮನಕ್ಕೆ ಬಂದಿಲ್ಲವಾ? ಪಕ್ಷದ ಭವಿಷ್ಯದ ಬಗೆಗೆ ಬಿಜೆಪಿ ನಾಯಕರಿಗೆ ಕಾಳಜಿ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಚಿಮನ್ಭಾಯ್ ಎದುರಾಗಿ ದೊಡ್ಡ ಆಂದೋಲನ ನಡೆಸಿದ ಪಕ್ಷ, ಕೇಶುಭಾಯ್ ಅವರನ್ನ ಕಿತ್ತೊಗೆಯಲು ಮೀನಮೇಷ ಎಣಿಸದ ಪಕ್ಷ ಈಗ ಕರ್ನಾಟಕದ ಕೇಶುಭಾಯ್ ಬಗ್ಗೆ ಭಯಪಡುತ್ತಿದೆಯಾ? ಇದು ಶ್ಯಾಮಪ್ರಸಾದ್ ಮುಖರ್ಜಿ, ದೀನದಯಾಳ್ ಉಪಾಧ್ಯಾಯ ಮತ್ತು ಅಟಲ್ಜಿ ಅವರ ಪಕ್ಷವಾ ಎಂದಿದ್ದಾರೆ.
ತಮ್ಮ ಟ್ವೀಟ್ನಲ್ಲಿ ಪ್ರಧಾನಿ ಮೋದಿ ಮತ್ತು ಪ್ರಹ್ಲಾದ್ ಜೋಶಿ ಅವರನ್ನು ಟ್ಯಾಗ್ ಮಾಡಿರುವ ಅವರು, ಬಿಎಸ್ವೈ ಮತ್ತು ಅವರ ಕುಟುಂಬದವರ ಭ್ರಷ್ಟಾಚಾರವನ್ನು ಹೇಗೆ ಸಹಿಸಿಕೊಂಡಿದ್ದೀರಿ. ಪಕ್ಷದ ಗೌರವ, ಭವಿಷ್ಯ ಮತ್ತು ಪ್ರಧಾನಿಯ ಪ್ರತಿಷ್ಟೆ ಎಲ್ಲವೂ ಕರ್ನಾಟಕದ ಕಸದ ಬುಟ್ಟಿಯಲ್ಲಿದೆ. ನಿಮ್ಮ ನಿಷ್ಕ್ರಿಯತೆಯಿಂದ ದೇಶವನ್ನು ಹೇಗೆ ಮುನ್ನಡೆಸಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
@narendramodi @JoshiPralhad A party which launched massive movement against Chimanbhai, which did not hesitate to axe Keshubhai, appears to be afraid of 100 times bigger Keshubhai of Karnataka? Is this party of Mukarjea, Upadhyaya and Atalji ? Has it become effeminate?
— Shankar M Bidari (@ShankarMBidari1) September 18, 2020
@narendramodi @PMOIndia @JoshiPralhad Dear Sir, Why are you tolerating worst type of corruption by your CM and family in Karnataka? Do you know that now honour , ideals , image and future of the Party and PM are now in dustbin of Karnataka? Regards
— Shankar M Bidari (@ShankarMBidari1) September 18, 2020
ಇದನ್ನೂ ಓದಿ: ಬಿವೈ ವಿಜಯೇಂದ್ರ 5,000 ಕೋಟಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಬಿಜೆಪಿ ಶಾಸಕರಿಂದಲೇ ಆರೋಪ!