ಈ ದೇಶ ಹೆಣ್ಣುಮಕ್ಕಳಿಗೆ ಕ್ರೂರವಾಗಿದೆ: ನನಗೆ ತಾಯ್ತನವೇ ಬೇಡ: ನಟಿ ಪಾರುಲ್ ಯಾದವ್
ಈ ದೇಶ ಹೆಣ್ಣುಮಕ್ಕಳಿಗೆ ಕ್ರೂರವಾಗಿದೆ. ನನ್ನ ಮಗು ಹೆಣ್ಣಾದರೆ ಏನು ಗತಿ, ನನಗೆ ತಾಯ್ತನವೇ ಬೇಡ ಎಂದು ನಟಿ ಪಾರುಲ್ ಯಾದವ್ ಹೇಳಿದ್ದಾರೆ.
ಉತ್ತರ ಪ್ರದೇಶದ ಹತ್ರಾಸ್ನಲ್ಲಿ ಸಾವನ್ನಪ್ಪಿದ 19 ವರ್ಷದ ಯುವತಿಯ ಮೇಲಿನ ಅತ್ಯಾಚಾರ ಮತ್ತು ಕ್ರೂರ ಹಿಂಸೆ ಪ್ರಕರಣದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಪಾರುಲ್, ನಾನು ತಾಯಿಯಾಗುವುದಿಲ್ಲ.ನನಗೆ ತಾಯ್ತನವೇ ಬೇಡ ಎಂದು ಹೇಳಿದ್ದಾರೆ.
‘ಹೆಣ್ತನದ ಸಾರವೇ ತಾಯ್ತನ. ಆದರೆ ನಾನಿಂದು ತಾಯಿಯಾಗಲು ಬಯಸುತ್ತಿಲ್ಲ. ಒಂದು ಹೆಣ್ಣಾಗಿ ಹೀಗೆ ಹೇಳುವುದು ತುಂಬಾ ಕಷ್ಟ. ಆದರೆ ನಾನು ಆಣೆ ಮಾಡಿ ಹೇಳುತ್ತಿದ್ದೇನೆ. ನಿಜಕ್ಕೂ ನಾನು ತಾಯ್ತನವನ್ನು ತ್ಯಜಿಸುತ್ತಿದ್ದೇನೆ. ಈ ದೇಶ ಮಹಿಳೆಯರಿಗೆ ಕ್ರೂರಿಯಾಗಿದೆ. ನನ್ನ ಮಗು ಹೆಣ್ಣಾದರೆ ಏನು ಗತಿ? ಹತ್ರಾಸ್ನಲ್ಲಿ ನಡೆದ ಭಯಂಕರ ಘಟನೆ ಇತ್ತೀಚೆಗಿನ ಉದಾಹರಣೆ’ ಎಂದು ಪಾರುಲ್ ಯಾದವ್ ಟ್ವೀಟ್ ಮಾಡಿದ್ದಾರೆ.
Being a mother is the epitome of womanhood but, today I don't want to be a mother. It's the most difficult thing for a girl to say but I swear I'm giving up my motherhood. What if my child is a girl?? This country is brutal for women – all around.
— Parul Yadav (@TheParulYadav) October 1, 2020
ಕಾರಣಗಳು ಬೇರೆ ಇರಬಹುದು, ಆದರೆ ಸಂಕಷ್ಟ ಯಾವಾಗಲೂ ಹೆಣ್ಣಿಗೇ, ಅವಳಿಗೆ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂಬುದಾಗಿ ಪಾರೂಲ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಅತ್ಯಾಚಾರಿಗಳನ್ನು ರಕ್ಷಿಸುತ್ತಿರುವ ಪ್ರಭುತ್ವ, ಕರಾಳ ದಿನಗಳಲ್ಲಿ ಭಾರತ: ಮಹಿಳಾ ಮುನ್ನಡೆ ಆಕ್ರೋಶ