ಚಾಕಲೇಟ್ ಕೊಟ್ಟು ಅತ್ಯಾಚಾರ : ಮರವೇರಿ ಕುಳಿತವನನ್ನು ಹೊಡೆದು ಕೊಂದ ಜನ…
ಚಾಕಲೇಟ್ ಕೊಡಿಸುವುದಾಗಿ ಹೇಳಿ 4 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಮರವೇರಿ ಕುಳಿತ ಯುವಕನನ್ನು ಕುಟುಂಬಸ್ಥರು ಹೊಡೆದು ಕೊಂದ ಘಟನೆ ಬಿಹಾರ್ ನ ಕೈಮೂರ್ ನಡೆದಿದೆ.
4 ವರ್ಷದ ಬಾಲಕಿ ಮೇಲೆ ಅತ್ಯಾಚಾರದ ಆರೋಪಿಯ ಸಿಪು ಕುಮಾರ್ ಎಂದು ಗುರುತಿಸಲಾಗಿದೆ. ಈತ ಕಬಲ್ ಗ್ರಾಮದ ನಿವಾಸಿಯಾಗಿದ್ದು, ಟ್ಯಾಪ್ ವಾಟರ್ ಸ್ಕೀಮ್ ನಲ್ಲಿ ಆಪರೇಟರ್ ಆಗಿ ಕೆಲಸ ಮಾಡ್ತಾಯಿದ್ದನು. ಈತ ಬಾಲಕಿ ಆಟವಾಡುವಾಗ ಚಾಕಲೇಟ್ ಕೊಡಿಸುವುದಾಗಿ ಹೇಳಿ ಹತ್ತಿರದ ಪಂಚಾಯಿತ್ ಭವನಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಬಾಲಕಿ ಕುಟುಂಬಸ್ಥರಿಗೆ ವಿಚಾರ ಗೊತ್ತಾಗುತ್ತಿದ್ದಂತೆ ಮರವೇರಿ ಕುಳಿತ ಯುವಕನನ್ನು ಕುಟುಂಬಸ್ಥರು ಅಮಾನುಶವಾಗಿ ಹೊಡೆದು ಕೊಂದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಯುವಕನ ಕುಟುಂಬರು ಬಾಲಕಿ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದಾರೆ. ಕುಮಾರ್ ಬಾಲಕಿ ಮೇಲೆ ಅತ್ಯಾಚಾರ ಎಸಗಿಲ್ಲ. ಬಾಲಕಿ ಆಟವಾಡುತ್ತಿದ್ದಾಗ ಬಿದ್ದು ಗಾಯಗೊಂಡಿದ್ದಾಳೆ. ಈ ವೇಳೆ ಕುಮಾರ್ ಬಾಲಕಿಗೆ ಚಾಕಲೇಟ್ ಕೊಟ್ಟು ಸಮಾಧಾನ ಮಾಡಿದ್ದಾನೆ. ಇದನ್ನೇ ಬಾಲಕಿ ಕುಟುಂಬಸ್ಥರು ತಪ್ಪಾಗಿ ಭಾವಿಸಿದ್ದಾರೆಂದು ಕುಮಾರ್ ಕುಟುಂಬಸ್ಥರು ಬಾಲಕಿ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದಾರೆ.
ಸದ್ಯ ಪ್ರಕರಣದಲ್ಲಿ ಬಾಲಕಿ ಚಿಕ್ಕಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.