ಚೆಸ್ ಚಾಂಪಿಯನ್ ವಿಶ್ವನಾಥ್ ಆನಂದ್ಗೆ ಮೋಸ ಮಾಡಿದ್ರಾ ನಟ ಸುದೀಪ್? ಚೆಸ್ ಕೋಚ್ ಹೇಳಿದ್ದೇನು?
ಚೆಸ್ ಅಟದ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರಿಗೆ ಆನ್ಲೈನ್ ಚೆಸ್ ಆಟದಲ್ಲಿ ಕನ್ನಡದ ಖ್ಯಾತ ನಟ ಸುದೀಪ್ ಮೋಸ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಕೆಲವು ಸ್ಕ್ರೀನ್ಶಾಟ್ಗಳನ್ನು ಕೋಚ್ ಶ್ರೀನಾಥ್ ನಾರಾಯಣನ್ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಆನಂದ್ ಅವರು ಕರೊನಾ ಪರಿಹಾರ ನಿಧಿ ಸಂಗ್ರಹಕ್ಕಾಗಿ ವಿವಿಧ ಸೆಲೆಬ್ರಿಟಿಗಳ ಜೊತೆ ಚೆಸ್ ಪಂದ್ಯವನ್ನು ಆಡಿದ್ದರು. ಈ ವೇಳೆ, ಯುವ ಬಿಲೇನಿಯರ್, ಉದ್ಯಮಿ ನಿಖಿಲ್ ಕಾಮತ್ ಮೋಸದ ಆಟವಾಡಿ ಕ್ಷಮೆ ಕೇಳಿದ್ದರು. ಇದೀಗ ನಿಖಿಲ್ ಬಳಿಕ ನಟ ಸುದೀಪ್ ಮತ್ತು ನಿರ್ಮಾಪಕ ಸಾಜಿದ್ ನಾಡಿಯಾದ್ವಾಲಾ ಸಹ ಮೋಸದ ಆಟವಾಡಿರುವುದು ಬೆಳಕಿಗೆ ಬಂದಿದೆ.
ಒಟ್ಟು 10 ಪಂದ್ಯಗಳ ಪೈಕಿ 1 ಪಂದ್ಯವನ್ನು ನಿಖಿಲ್ ಕಾಮತ್ ಗೆದ್ದಿದ್ದರು. ಉಳಿದ 9 ಆಟಗಳನ್ನೂ ವಿಶ್ವನಾಥನ್ ಆನಂದ್ ಜಯಿಸಿದ್ದರು. ಚೆಸ್ ದಿಗ್ಗಜ ಆನಂದ್ರನ್ನೇ ಹವ್ಯಾಸಿ ಆಟಗಾರ ಸೋಲಿಸಿದ್ದು, ಅಚ್ಚರಿ ಮೂಡಿಸಿತ್ತು. ಹೀಗಾಗಿ ನಿಖಿಲ್ ಮೋಸ ಮಾಡಿ ಗೆದ್ದಿರುವ ಬಗ್ಗೆ ಅನುಮಾನಗಳು ವ್ಯಕ್ತವಾದ ಬೆನ್ನಲ್ಲೇ ಕಂಪ್ಯೂಟರ್ ಮತ್ತು ಇತರ ನೆರವಿನ ಮೂಲಕ ಆನಂದ್ರನ್ನು ಮಣಿಸಿದ್ದನ್ನು ಒಪ್ಪಿಕೊಂಡಿದ್ದ ನಿಖಿಲ್, ಕ್ಷಮೆಯಾಚಿಸಿದ್ದಾರೆ.
Everyone suspected this. I didn't want to be the judge, jury, executioner. Now the truth of this whole thing is out and clear. pic.twitter.com/SqSbqpqRcf
— Srinath Narayanan (@nsrinath69) June 14, 2021
ಇದೀಗ ಕೋಚ್ ಶ್ರೀನಾಥ್ ನಾರಾಯಣನ್, ಸುದೀಪ್ ಮತ್ತು ಸಾಜಿದ್ ಅವರ ಆಟವನ್ನು ಎಲ್ಲರೂ ಅನುಮಾನಿಸಿದ್ದಾರೆ. ಹಾಗಂತ ನಾನಿಲ್ಲಿ ನ್ಯಾಯಾಧೀಶನಲ್ಲ. ತೀರ್ಪುಗಾರನೂ ಅನ್ನು ಅಲ್ಲ. ಆಟದ ಸತ್ಯ ಬಯಲಾಗಿದೆ. ಸತ್ಯವು ಸ್ಪಷ್ಟವಾಗಿದೆ ಎಂದು ಬರೆದುಕೊಂಡು, ಸುದೀಪ್ ಮತ್ತು ನಾಡಿಯಾದ್ವಾಲಾ ಅವರ ಚೆಸ್ಮೇಟ್ನಲ್ಲಿನ ಖಾತೆಯನ್ನು ರದ್ದು ಮಾಡಿದ್ದಾರೆ.
ಇದನ್ನೂ ಓದಿ: ಪಂಜಾಬ್ ಸಿಎಂ ಮನೆ ಮುಂದೆ ಪ್ರತಿಭಟನೆ: ಅಕಾಲಿ ದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಂಧನ!