ಫ್ಯಾಕ್ಟ್‌ಚೆಕ್: ಮಂಗಳೂರಿನ ಝೀನತ್ ಬಕ್ಷ್ ಮಸೀದಿಯನ್ನು ಹಿಂದೂ ದೇವಾಲಯದ ಮೇಲೆ ನಿರ್ಮಿಸಲಾಗಿಲ್ಲ

ಕರ್ನಾಟಕದ ಮಂಗಳೂರಿನಲ್ಲಿ ಮಸೀದಿಯಾಗಿ ಪರಿವರ್ತನೆಯಾಗಿರುವ ಪುರಾತನ ದೇವಾಲಯದ ದೃಶ್ಯಗಳು ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪೋಸ್ಟ್‌ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್:

ವಿಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದರೆ, ವೀಡಿಯೊದ ಮೇಲಿನ ಎಡ ಭಾಗದಲ್ಲಿ ” Thousands  shades of India ” ಎಂಬ ಸಾಲಿನ ವಾಟರ್‌ಮಾರ್ಕ್ ಅನ್ನು ನೋಡಬಹುದು. ಈ ಕೀವರ್ಡ್‌ಗಳನ್ನು ಬಳಸಿಕೊಂಡು ವೀಡಿಯೊವನ್ನು ಹುಡುಕಿದಾಗ, ಇದೇ ರೀತಿಯ ದೃಶ್ಯಗಳನ್ನು ಹೊಂದಿರುವ ವಿಡಿಯೊವನ್ನು 20 ಡಿಸೆಂಬರ್ 2021 ರಂದು ‘ದಿ ಥೌಸಂಡ್ ಶೇಡ್ಸ್ ಆಫ್ ಇಂಡಿಯಾ’ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿರುವುದು ಕಂಡುಬಂದಿದೆ. ಅವರು ಅದನ್ನು ಬಂದರು ಪ್ರದೇಶದಲ್ಲಿ ನೆಲೆಗೊಂಡಿರುವ ಪುರಾತನ ಝೀನತ್ ಬಕ್ಷ್ ಮಸೀದಿಯ ವಿಡಿಯೊ ಎಂದು ಉಲ್ಲೇಖಿಸಿದ್ದಾರೆ. ಇದನ್ನು ಕರ್ನಾಟಕದ ಮಂಗಳೂರು ನಗರದಲ್ಲಿ ನಿರ್ಮಿಸಲಾದ ಮೂರನೇ ಅತ್ಯಂತ ಹಳೆಯ ಮಸೀದಿ ಎಂದು ಉಲ್ಲೇಖಿಸಲಾಗಿದೆ.

 

ಜೀನತ್ ಬಕ್ಷ್ ಮಸೀದಿಯ ಇತಿಹಾಸವು ‘ಕರ್ನಾಟಕ ಪ್ರವಾಸೋದ್ಯಮ’ ವೆಬ್‌ಸೈಟ್ ಮತ್ತು ಝೀನತ್ ಬಕ್ಷ್ ಮಸೀದಿ ಫೇಸ್‌ಬುಕ್ ಪೇಜ್‍ನಲ್ಲಿ ಲಭ್ಯವಿದೆ. ‘ಬೆಲಿಯೆ ಪಲ್ಲಿ’ ಮತ್ತು ‘ಜಮ್ಮಾ ಮಸೀದಿ’ ಎಂದೂ ಕರೆಯಲ್ಪಡುವ ಜೀನತ್ ಬಕ್ಷ್ ಮಸೀದಿಯನ್ನು ಅರಬ್ ವ್ಯಾಪಾರಿಗಳು, ಕಿತ್ ಮತ್ತು ಸಹಬಾಸ್ (ಪ್ರವಾದಿ ಮೊಹಮ್ಮದ್ ಅವರ ಸಹಚರರು) ಸ್ಥಾಪಿಸಿದರು ಎಂದು ನಂಬಲಾಗಿದೆ. ಝೀನತ್ ಬಕ್ಷ್ ಮಸೀದಿಯು ಸಂಪೂರ್ಣ ಭಾರತೀಯ ವಾಸ್ತುಶಿಲ್ಪದ ಶೈಲಿಯಿಂದಾಗಿ ಎಲ್ಲಾ ಮಸೀದಿಗಳನ್ನು ಮೀರಿಸುತ್ತದೆ ಮತ್ತು ಮಸೀದಿಯು ಪ್ರವಾದಿ ಮೊಹಮ್ಮದ್ ಅವರ ಜೀವನ ಕಥೆಗಳನ್ನು ಚಿತ್ರಿಸುತ್ತದೆ ಎಂದು ಹೇಳಲಾಗಿದೆ. AD 7 ನೇ ಶತಮಾನದ ಅವಧಿಯಲ್ಲಿ, ಅರಬ್ ಮುಸ್ಲಿಂ ವ್ಯಾಪಾರಿಗಳು ಸ್ಥಳೀಯ ಜನಸಂಖ್ಯೆ ಮತ್ತು ಪಶ್ಚಿಮ ಕರಾವಳಿ ಬೆಲ್ಟ್‌ನ ಆಡಳಿತಗಾರರೊಂದಿಗೆ ಅತ್ಯಂತ ಸೌಹಾರ್ದಯುತ ಸಂಬಂಧವನ್ನು ಉಳಿಸಿಕೊಂಡಿದ್ದರು ಎನ್ನಲಾಗಿದ್ದು. ವಿವರಗಳ ಪ್ರಕಾರ, ಮಲಬಾರ್‌ನ ರಾಜಾ ಚೆರುಮಾನ್ ಪೆರುಮಾಳ್ ಅರಬ್ ವ್ಯಾಪಾರಿಗಳಿಗೆ ಸೂಕ್ತವಾದ ವಸತಿ ಮತ್ತು ವ್ಯಾಪಾರ ಮಾಡುವ ಸ್ಥಳವನ್ನು ನೀಡಿದ್ದರು ಮತ್ತು ಅವರ ಮಸೀದಿಗಳನ್ನು ನಿರ್ಮಿಸಲು ಭೂಮಿಯನ್ನು ಸಹ ಒದಗಿಸಿದ್ದರು.

ನಂತರ, 17 ನೇ ಶತಮಾನದಲ್ಲಿ, ಟಿಪ್ಪು ಸುಲ್ತಾನ್ ಈ ಮಸೀದಿಯನ್ನು ಸುಂದರವಾದ ಮರದ ಕೆತ್ತನೆಗಳೊಂದಿಗೆ ನವೀಕರಿಸಿದನು ಮತ್ತು ತನ್ನ ಮಗಳ ಹೆಸರನ್ನು ಝೀನತ್ ಬಕ್ಷ್ ಎಂದು ಹೆಸರಿಸಿದನು. ಮಸೀದಿ ಜೀನತ್ ಬಕ್ಷ್ ರೋಸ್‌ವುಡ್ ಮತ್ತು ತೇಗದ ಮರದಗಳಿಂದ ವಿನ್ಯಾಸಗೊಳಿಸಲಾಗಿದೆ. ಉತ್ಕೃಷ್ಟ ಬಗೆಯ ಗೋಡೆಗಳು, ಬಾಗಿಲುಗಳು ಮತ್ತು ಮಹಡಿಗಳನ್ನು ಒಳಗೊಂಡಿದೆ. ಬಂದರ್‌ನಲ್ಲಿರುವ ಜೀನತ್ ಬಕ್ಷ್ ಮಸೀದಿಯನ್ನು ಹಿಂದೂ ದೇವಾಲಯವನ್ನು ಕೆಡವಿ ನಿರ್ಮಿಸಲಾಗಿದೆ ಎಂದು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಕರ್ನಾಟಕದ ಮಂಗಳೂರಿನ ಜೀನತ್ ಬಕ್ಷ್ ಮಸೀದಿಯನ್ನು ಹಿಂದೂ ದೇವಾಲಯದ ಮೇಲೆ ನಿರ್ಮಿಸಲಾಗಿಲ್ಲ. ಪೋಸ್ಟ್‍ನಲ್ಲಿ ಮಾಡಿದ ಪ್ರತಿಪಾದನೆ ಸುಳ್ಳು.

ಕೃಪೆ:ಫ್ಯಾಕ್ಟ್‌ಲಿ


ಇದನ್ನು ಓದರಿ: ಫ್ಯಾಕ್ಟ್‌ಚೆಕ್: ಉ.ಕ ಜಿಲ್ಲೆ ಮುಸ್ಲಿಂ ಯುವಕನಿಗೆ ಕತ್ತಿಯಿಂದ ಇರಿತ ಘಟನೆಗೆ ಕೋಮು ದ್ವೇಷದ ಹಿನ್ನಲೆ ಇಲ್ಲವೆಂದ ಪೊಲೀಸರು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights