‘ಆರ್ ಬಿ ತಿಮ್ಮಾಪುರ ಧಾರವಾಡಕ್ಕೆ ಹೋಗಿ ಟೆಸ್ಟ್ ಮಾಡಿಸಿಕೊಳ್ಳಲಿ’ ವೀರಣ್ಣ ಚರಂತಿಮಠ ತಿರುಗೇಟು..
ಬಿಎಸ್ವೈ, ನಳೀನ್ ಕುಮಾರ್ ಕಟೀಲ್ ಮಧ್ಯೆ ಭಿನ್ನಮತ, ಅಸಮಾಧಾನ ವಿಚಾರಕ್ಕೆ ಬಾಗಲಕೋಟೆಯಲ್ಲಿ ಬಿಜೆಪಿ ಶಾಸಕ ವೀರಣ್ಣ ಚರಂತಿಮಠ ಪ್ರತಿಕ್ರಿಯೆ ನೀಡಿ, ಆರ್ ಬಿ ತಿಮ್ಮಾಪುರ ಧಾರವಾಡಕ್ಕೆ ಹೋಗಿ ಸ್ವಲ್ಪ ಟೆಸ್ಟ್ ಮಾಡಿಸಿಕೊಂಡು ಬರೋದು ಒಳ್ಳೆದು ಎಂದು ಮಾಜಿ ಸಚಿವ ಆರ್ ಬಿ ತಿಮ್ಮಾಪುರ ಏಟಿಗೆ ಶಾಸಕ ವೀರಣ್ಣ ಚರಂತಿಮಠ ತಿರುಗೇಟು ಕೊಟ್ಟಿದ್ದಾರೆ.
ತಲೆಕಡೆ ಬೊಟ್ಟು ಮಾಡಿ (ಮೆಂಟಲ್ ಆಸ್ಪತ್ರೆಗೆ)ಟೆಸ್ಟ್ ಮಾಡಿಸಿಕೊಳ್ಳೋದು ಒಳ್ಳೆಯದು. ಅವ್ರ ರಾಜ್ಯದ ಪಕ್ಷದ ಕಾರ್ಯಾಲಯದಲ್ಲಿ ಯಾರ್ಯಾರು ಹೇಗೆಲ್ಲಾ ಮಾತನಾಡಿದ್ದಾರೆ. ಅಲ್ಲಿ ಮಾರಾಮಾರಿ ಆಗ್ತಿತ್ತು,ಅವರ ಬಳಸಿದ ಶಬ್ದ. ಮೊದಲು ತಮ್ಮದು ತಾವು ನೋಡಿಕೊಳ್ಳಲಿ. ಅವ್ರು ನಮ್ಮ ಪಕ್ಷದ ಬಗ್ಗೆ ಚಿಂತೆ ಮಾಡೋದು ಬ್ಯಾಡ. ಬೇರೆ ಪಕ್ಷದವರ ಬಗ್ಗೆ ಮಾತನಾಡುವ ಮುನ್ನ ತಮ್ಮದ ತಾವು ಸರಿಪಡಿಸಿಕೊಳ್ಳಲಿ.
ಕೇಂದ್ರ,ರಾಜ್ಯದಲ್ಲೂ ನಮ್ಮ ನಾಯಕತ್ವ ಬಲಿಷ್ಠವಿದೆ. ನಮ್ಮ ಪಕ್ಷದೊಳಗೆ ಅಂತಹ ಯಾವುದೇ ವಾತಾವರಣ ಇಲ್ಲ. ಇದೆಲ್ಲಾ ಊಹಾಪೋಹಗಳು,ಇದಕ್ಕೆ ಯಾರು ಕಿವಿಗೊಡಬಾರದು. ಇದೆಲ್ಲಾ ಮಾಧ್ಯಮಗಳ ಸೃಷ್ಟಿ. ತಿಮ್ಮಾಪುರ ತಮ್ಮ ಪಕ್ಷದಲ್ಲಿ ಏನೇಲ್ಲಾ ನಡೆದಿದೆ ಅನ್ನೋದು ತಿಳಿದು ಮಾತನಾಡಲಿ ಎಂದು ಬಿಜೆಪಿ ಶಾಸಕ ವೀರಣ್ಣ ಚರಂತಿಮಠ ತಿರುಗೇಟು ಕೊಟ್ಟಿದ್ದಾರೆ.