ಚಲಿಸುತ್ತಿದ್ದ ವಾಹನದಲ್ಲಿ ಕಾಣಿಸಿಕೊಂಡ ಬೆಂಕಿ – ದಂಗಾದ ಹಿಂಬದಿ ಸವಾರರು..!
ನಿನ್ನೆ ಮಧ್ಯಾನ್ಹ 12 ಗಂಟೆಗೆ ಚಲಿಸುತ್ತಿದ್ದ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡುಹಿಂಬದಿ ಸವಾರರನ್ನು ದಂಗಾಗಿಸಿದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ.
ಹೌದು.. ಕೊಲ್ಲಾಪುರದ ಎಂ.ಐ.ಡಿ.ಸಿ ಯಿಂದ ಚೆನೈಗೆ ತೆರಳುತ್ತಿದ್ದ ವಾಹದಲ್ಲಿ ಬೆಂಕಿ ಕಾಣಿಸಿಕೊಂಡು ಡ್ರೈವರ್ ಸಮಯ ಪ್ರಜ್ಞೆಯಿಂದ ಬಾರಿ ಅನಾಹುತ ತಪ್ಪಿದೆ. ಜನರೇಟರ್ ಸಾಗಿಸುವಾಗ ಬ್ಯಾಟರಿ ಸಮಸ್ಯೆಯಿಂದ ಬೆಂಕಿ ಕಾಣಿಸಿಕೊಂಡಿದ್ದದೆ.
ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ಕಂಡು ತಕ್ಷಣ ಹೆದ್ದಾರಿ ಪಕ್ಕದ ಸಂಕೇಶ್ವರ ಪಟ್ಟಣಕ್ಕೆ ಲಾರಿ ತಂದಿದ್ದಾನೆ ಡ್ರೈವರ್. ವಾಷಿಂಗ್ ಪಾಯಿಂಟ್ ಗೆ ತಂದು ಸ್ಥಳೀಯರ ಸಹಾಯದಿಂದ ಬೆಂಕಿ ನಂದಿಸಿಸಲಾಗಿದೆ. ಡ್ರೈವರ್ ಸಾಹಸದ ವಿಡಿಯೋ ಈಗ ವೈರಲ್ ಆಗಿದೆ.
Hi, all is going well here and ofcourse every one is sharing data, that’s actually good, keep up writing.