ಲಸಿಕೆ‌ ಹಾಕಿದ್ದಕ್ಕೆ 7 ಮೇಕೆಗಳ ಸರಣಿ ಸಾವು : ರೈತ ಕಂಗಾಲು

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಹೆತ್ತೋಗನಹಳ್ಳಿ‌ ಗ್ರಾಮದಲ್ಲಿ 7 ಮೇಕೆಗಳ ಸರಣಿ ಸಾವಪ್ಪಿದ್ದು, ಮೇಕೆಗಳ ಮಾಲೀಕನಿಂದ ಲಸಿಕೆ ನೀಡಿಸಿದ ಕಾಂಪೋಡರ್ ಮೇಲೆ ದೂರು ನೀಡಲಾಗಿದೆ.‌

ಹೌದು.. ವಜ್ರಪ್ಪ ಎಂಬುವರಿಗೆ ಸೇರಿದ ೭ ಮೇಕೆಗಳು ಕೊಟ್ಟಿಗೆಯಲ್ಲಿ‌ ಸಾವನ್ನಪ್ಪಿವೆ. ಮಲಬದ್ದತೆಯಿಂದ ನರಳುತ್ತಿದ್ದ‌‌ ೧ ಮೇಕೆಗೆ ಲಸಿಕೆ ಹಾಕುವ ಬದಲು‌ ಎಲ್ಲಾ ಮೇಕೆಗೂ‌ ಲಸಿಕೆ‌ ಹಾಕಿದ್ದರಿಂದ ೧೨ ಮೇಕೆಯಲ್ಲಿ ಇದೀಗ೭ ಮೇಕೆ ಸಾವನ್ನಪಿದ್ದು ಉಳಿದ ೫ ಮೇಕೆ ಕೂಡ ಸಾಯುವ ಪರಿಸ್ಥಿತಿ‌ಯಲ್ಲಿವೆ. ಮೇಕೆಗಳ ಸರಣಿ ಸಾವಿನಿಂದ ಕಂಗಾಲಾದ ಮೇಕೆ ಸಾಕಿದ್ದ ರೈತ, ಲಸಿಕೆ ನೀಡಿದ್ದ ಕಾಂಪೋಂಡರ್ ಕೆಂಪಣ್ಣ‌ ವಿರುದ್ದ ನಿರ್ಲಕ್ಷ್ಯ ಆರೋಪ ಮಾಡಿದ್ದಾನೆ.

ಸ್ಥಳಕ್ಕೆ ಪಶು ಸಂಗೋಲನಾ ಅಧಿಕಾರಿ ನಂಜಪ್ಪ ಭೇಟಿ ಪರಿಶೀಲನೆ ನಡೆಸಿದ್ದಾರೆ. ಮೇಕೆಗಳ ಸಾವಿನಿಂದ ಆತಂಕದಲ್ಲಿರೋ ಮೇಕೆ ಮಾಲೀಕ ರೈತನಿಗೆ ಇಲಾಖೆಯಿಂದ ಪರಿಹಾರ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights