ಶಿವಮೊಗ್ಗ ಸಕ್ರೆಬೈಲು ಆನೆ ಬಿಡಾರದಲ್ಲಿ 25 ವರ್ಷದ ಆನೆ ಸಾವು…
ಇತ್ತೀಚೆಗೆ ಕಾಡುಪ್ರಾಣಿಗಳ ರಕ್ಷಣೆ ಮಾಡುವಲ್ಲಿ ನಾಡಿನ ಜನ ವಿಫಲರಾಗಿದ್ದಾರೆ. ಯಾಕೆಂದ್ರೆ ವನ್ಯ ಜೀವಿಗಳನ್ನು ರಕ್ಷಣೆಗೆಂದು ನಾಡಿಗೆ ತಂದು ಅವುಗಳ ಪಾಲನೆ ಸರಿಯಾಗಿ ಮಾಡದೇ ಪ್ರಾಣಿಗಳು ಅನಾರೋಗ್ಯದಿಂದ ಸಾವನ್ನಪ್ಪುತ್ತಿರುವ ಉದಾಹರಣೆಗಳು ಸಾಕಷ್ಟಿವೆ. ಇಂತಹ ಕಾಡುಪ್ರಾಣಿಗಳ ಪಟ್ಟಿಯಲ್ಲಿ ಸಾವನ್ನಪ್ಪುತ್ತಿರುವುದು ಕಾಡಾನೆಗಳು. ಇಂತಹದ್ದೇ ಒಂದು ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗ ಸಕ್ರೆಬೈಲು ಆನೆ ಬಿಡಾರದಲ್ಲಿ 25 ವರ್ಷದ ನಾಗಣ್ಣ ಎಂದು ಕರೆಸಿಕೊಳ್ಳಿತ್ತಿದ್ದ ಆನೆ ಸಾವುನ್ನಪ್ಪಿದೆ.
ಕಳೆದ ಒಂದು ವರ್ಷದ ಹಿಂದೆ ಚೆನ್ನಗಿರಿಯ ಉಬ್ರಾಣಿ ಕಾಡಿನಲ್ಲಿ ನಾಗಣ್ಣ ಆನೆ ಸೆರೆ ಸಿಕ್ಕಿತ್ತು. ಒಂದು ವರ್ಷದಿಂದ ಸಕ್ರೆಬೈಲು ಆನೆ ಬಿಡಾರದಲ್ಲಿ ಈ ಆನೆಗೆ ತರಬೇತಿ ನೀಡಲಾಗುತ್ತಿತ್ತು. ಆದರೆ ಇತ್ತೀಚೆಗೆ ವಿಪರೀತ ಬೇದಿಯಾಗಿರುವ ಪರಿಣಾಮ ಅಸ್ವಸ್ಥಗೊಂಡಿದ್ದ ನಾಗಣ್ಣ ನಿನ್ನೆ ಬೆಳಗ್ಗೆ ಕಾಡಿನಿಂದ ಕರೆತರುವ ವೇಳೆ ಅಸ್ವಸ್ಥತೆಯಿಂದ ಬಳಲುತ್ತಿತ್ತು. ನಂತರ ವಿಪರೀತ ಬೇದಿಯಿಂದ ಬಳಲುತ್ತಿತ್ತು.
ಚಿಕಿತ್ಸೆಗೂ ಸ್ಪಂಧಿಸದ ಆನೆ ತಡ ರಾತ್ರಿ ಸಾವನ್ನಪ್ಪಿದೆ.