ರಸ್ತೆಯಲ್ಲಿ ‘ಹ್ಯಾಪಿ ನ್ಯೂ ಇಯರ್’ ಬರೆಯಲು ಹೊದವರಿಗೆ ಅಪಘಾತ: ಇಬ್ಬರು ಯುವಕರ ಸಾವು!

ಕೊರೊನಾ-ಲಾಕ್‌ಡೌನ್‌ ಸಂಕಷ್ಟಗಳನ್ನು ಎದುರಿದ್ದ 2020ರ ವರ್ಷ ಅಂತ್ಯವಾಗಿದ್ದು, 2021ನೇ ಹೊಸ ವರ್ಷ ಆರಂಭವಾಗಿದೆ. ಆದರೆ, ಹೊಸ ವರ್ಷವನ್ನು ಹರ್ಷದಿಂದ ಸಂಭ್ರಮಿಸಲು ಹೋದ ಇಬ್ಬರು ಯುವಕರು ಅಪಘಾತಕ್ಕೆ ಒಳಗಾಗಿ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಕಾರ್ಕಳದ ಮೀಯಾರು ಕಾಜರ ಬೈಲಿ ಎಂಬ ಊರಿನ ಇಬ್ಬರು ಯುವಕರು ಹೊಸ ವರ್ಷದ ಸಂಭ್ರಮಕ್ಕಾಗಿ ರಸ್ತೆಯಲ್ಲಿ ‘ಹ್ಯಾಪಿ ನ್ಯೂ ಇಯರ್‌’ ಎಂದು ಬರೆಯಲು ಹೋಗಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ.

ರಸ್ತೆಯಲ್ಲಿ ಯುವಕರು ಶುಭಾಷಯ ಬರೆಯುತ್ತಿದ್ದ ವೇಳೆ, ವೇಗವಾಗಿ ಬಂದ ಈಕೋ ಕಾರು ಯುವಕರಿಗೆ ಡಿಕ್ಕಿ ಹೊಡೆದಿದ್ದು, ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಮೃತಪಟ್ಟವರನ್ನು ಬಾಗಲಕೋಟೆಯ ಶರಣ್ ಮತ್ತು ಸಿದ್ದು ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೋಜು-ಮಸ್ತಿ ಎಲ್ಲವೂ ಇರಬೇಕು. ಜೀವನದಲ್ಲಿ ಅದೆಲ್ಲವೂ ಮುಖ್ಯ. ಆದರೆ, ಅದೆಲ್ಲದಕ್ಕಿಂತ ಜೀವ ಅಮೂಲ್ಯವಾದುದು, ಕಳೆದುಕೊಳ್ಳುವಂತಹ ಅಪಾಯಕ್ಕೆ ಕೈ ಹಾಕಬೇಡಿ, ಎಚ್ಚರಿಕೆ ಇಂದಿರಿ.


ಇದನ್ನೂ ಓದಿ: ಕಪಿಲ್ ಗುಜ್ಜರ್ BJP ಸೇರ್ಪಡೆ ಮತ್ತು ಉಚ್ಚಾಟನೆ; ಬಿಜೆಪಿಯ ಇಂಥದ್ದೇ ಯಡವಟ್ಟುಗಳು ಹೀಗಿವೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights