ಅನಾರೋಗ್ಯದ ನಡುವೆಯೂ ಜನಸೇವೆ ಮಾಡಿದ ಯತ್ನಾಳ….!
ಅನಾರೋಗ್ಯದ ನಡುವೆಯೂ ವಿಜಯಪುರದಲ್ಲಿ ಜನಸೇವೆ ಮಾಡಿದ್ದಾರೆ ಬಸನಗೌಡ ರಾ. ಪಾಟೀಲ ಯತ್ನಾಳ.
ಹೌದು.. ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ಅವರು ಮಂಗಳವಾರದಿಂದ ಅನಾರೋಗ್ಯ ಪೀಡಿತರಾಗಿದ್ದಾರೆ. ವೈದ್ಯರು ಡ್ರಿಪ್ ಹಾಕಿ ವಿಶ್ರಾಂತಿಗೆ ಸೂಚಿಸಿದ್ದಾರೆ. ಅದನ್ನು ಲೆಕ್ಕಿಸದೇ ನಾನಾ ಅಭಿವೃದ್ಧಿ ಕಾಮಗಾರಿಗಳಲ್ಲಿ ಭಾಗಿಯಾಗಿದ್ದಾರೆ.
ಇಂದು ವಿಜಯಪುರ ನಗರದ ವಾರ್ಡ್ ಸಂಖೆ 4ರ ಪುರಾತನ ಭಾವಿ ಜೀರ್ಣಾದ್ಧಾರ ಗಂಗಾಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಬಲಗೈಗೆ ಸಲಾಯಿನ್ ಸೆಟ್ ಅಳಚಡಿಸಿರುವ ಬಗ್ಗೆ ಕಂಡು ಬಂದಿದೆ. ಆದರೂ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯತ್ನಾಳ್ ಜನಮನ ಗೆದ್ದಿದ್ದಾರೆ.