ಅಯೋಧ್ಯೆಯಲ್ಲಿ ವಾಲ್ಮೀಕಿ ಶ್ರೀಗಳ ಮಂದಿರವೂ ನಿರ್ಮಾಣವಾಗಲಿ – ಪ್ರಸನ್ನಾನಂದ ಪುರಿ ಸ್ವಾಮೀಜಿ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಜೊತೆಗೆ ಅಯೋಧ್ಯೆಯಲ್ಲಿ ವಾಲ್ಮೀಕಿ ಶ್ರೀಗಳ ಮಂದಿರವೂ ನಿರ್ಮಾಣವಾಗಲಿ ಎಂದು ಕೊಪ್ಪಳದಲ್ಲಿ ವಾಲ್ಮೀಕಿ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ಹೇಳಿದ್ದಾರೆ.

ಹಂಪಿಯ ಕನ್ನಡ ವಿವಿಗೆ ವಾಲ್ಮೀಕಿ ಶ್ರೀ ಗಳ ನಾಮಕರಣ ಮಾಡಬೇಕು. ಇನ್ನು ಮುಂದೆ ನಿರ್ಮಾಣ ಆಗೊ ಕ್ಯಾಂಟಿನ್‌ಗಳಿಗೆ ಇಂದಿರಾ ಬದಲಾಗಿ ವಾಲ್ಮೀಕಿ ಅನ್ನ ಕುಟೀರ ನಾಮಕರಣದ ಸರಕಾರದ ನಿರ್ಧಾರವನ್ನು ಸ್ವಾಗತಿಸ್ತೇವೆ. ಎಲ್ಲರೂ ಮತ ಬ್ಯಾಂಕ್‌ಗಾಗಿ ಕೀಳುಮಟ್ಟದ ರಾಜಕಾರಣ ಮಾಡ್ತಾರೆ. ಬಜೆಟ್‌ನಲ್ಲಿ ಸಮಾಜದ ಪ್ರಗತಿಗೆ ಕೋಟಿಗಟ್ಟಲೇ ಹಣ ಇಡ್ತಾರೆ. ಅದೆಲ್ಲ ಮಧ್ಯವರ್ತಿಗಳ ಪಾಲಾಗ್ತಿದೆ.

ಶ್ರೀರಾಮುಲು ಅವರಿಗೆ ಡಿಸಿಎಂ ಸ್ಥಾನ-ಮಾನ ಕೊಡ್ತಿವಿ ಎಂಬ ಭರವಸೆ ಹುಸಿಯಾಗಿದೆ. ಈಗ ರಮೇಶ್ ಜಾರಕಿಹೊಳಿ, ಶ್ರೀರಾಮುಲು ವಾಲ್ಮೀಕಿ ಸಮುದಾಯದ ಎರಡು ಕಣ್ಣುಗಳು. ಇಬ್ಬರಲ್ಲಿ ಯಾರನ್ನಾದರೂ ಡಿಸಿಎಂ ಮಾಡಿದರೆ ಸ್ವಾಗತ. ರಾಜ್ಯದ ಎಲ್ಲ ಸಾಮಾನ್ಯ ಕ್ಷೇತ್ರಗಳು ದಕ್ಷಿಣ ಭಾಗದಲ್ಲಿ ಒಕ್ಕಲಿಗ, ಉತ್ತರ ಭಾಗದಲ್ಲಿ ಲಿಂಗಾಯತ ಮೀಸಲಾತಿ ಕ್ಷೇತ್ರಗಳಾಗಿವೆ.

ಯಡಿಯೂರಪ್ಪ ಅವರನ್ನ ಉಗಿದಿದ್ದೇನೆ. ಸಿದ್ದರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪ ಅವರನ್ನ ಕಟ್ಕೊಂಡ್ ನಾನೇನ್ ಮಾಡ್ಲಿ. ನನಗೆ ನನ್ನ ವಾಲ್ಮೀಕಿ ಸಮುದಾಯ ಹಾಗೂ ಸಮುದಾಯದ ಜನರೇ ಮುಖ್ಯ ಎಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights