ಅರುಣ್ ಜೇಟ್ಲಿ ಅಗಲಿಕೆಗೆ ಮೋದಿ, ಯಡಿಯೂರಪ್ಪ, ಗಣ್ಯರಿಂದ ಸಂತಾಪ
ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿಯವರ ಅಗಲಿಕೆಗೆ ರಾಜ್ಯದ ಸಿಎಂ ಯಡಿಯೂರಪ್ಪ, ಸಚಿವರು ಸಂತಾಪ ಸೂಚಿಸಿದ್ದಾರೆ.
‘ಅರುಣ್ ಜೇಟ್ಲಿಯವರ ನಿಧನ ವಾರ್ತೆ ನಮಗೆ ನೋವುಂಟು ಮಾಡಿದೆ. ಅವರು ನಮ್ಮ ಪಕ್ಷದ ಹಿರಿಯ ನೇತರಾರರು. ಹಣಕಾಸು ಸಚಿವರಾಗಿ ವಿಶ್ವಕ್ಕೆ ಒಂದು ಸಂದೇಶ ನೀಡಿದ್ದರು. ಜಿಎಸ್ಟಿ ಪರಿಚಿಯಿಸಿದ ನೇತರ ರಾಷ್ಟಕ್ಕೆ ಮಾದರಿಯಾದರು. ಮುತ್ಸದ್ದಿ ನಾಯಕನನ್ನ ಕಳೆದುಕೊಂಡಿದ್ದೇವೆ. ಬಿಜೆಪಿ ಪಕ್ಷಕ್ಕೆ ಇದೊಂದು ನಷ್ಟ’ ಎಂದು ಮೈಸೂರಿನಲ್ಲಿ ಉಸ್ತುವಾರಿ ಸಚಿವ ವಿ.ಸೋಮಣ್ಣ ಸಂತಾಪ ಸೂಚಿಸಿದ್ದಾರೆ.
[ಅರುಣ್ ಜೇಟ್ಲಿ ಆಗಲಿಕೆ ಸುದ್ದಿ ಕೇಳಿ ದುಃಖಿತರಾಗಿದ್ದೇವೆ. ಅವರ ಅಗಲಿಕೆಯಿಂದ ಬಿಜೆಪಿಗೆ ಬಹುದೊಡ್ಡ ನಷ್ಟವಾಗಿದೆ. ಜೇಟ್ಲಿ ಆರೋಗ್ಯವಂತರಾಗಿ ಬರ್ತಾರೆ ಅಂದುಕೊಂಡಿದ್ವಿ.
ಬಿಜೆಪಿಯನ್ನ ಕಟ್ಟುವಲ್ಲಿ ಜೈಟ್ಲಿ ಮಹತ್ವದ ಪಾತ್ರವಹಿಸಿದ್ದರು. ರಾಜ್ಯ ಬಿಜೆಪಿ ಉಸ್ತುವಾರಿ ವಹಿಸಿಕೊಂಡು ಸಾಕಷ್ಟು ಶ್ರಮಿಸಿದ್ದರು.ಚುನಾವಣೆ ಸ್ಟ್ಯ್ರಾಟಜಿ ಮಾಡುವಲ್ಲಿ ಜೇಟ್ಲಿ ನಿಸ್ಸೀಮರು. ಅವರಿಂದ ನಾನು ಸಾಕಷ್ಟು ಕಲಿತ್ತಿದ್ದೇನೆ.
ಚುನಾವಣೆ ಸಂದರ್ಭದಲ್ಲಿ ಉಸ್ತುವಾರಿ ವಹಿಸಿ ಅವರು ಮಾಡಿದ ಕೆಲಸ ಅನನ್ಯ. ಗುಜರಾತ್ನಲ್ಲಿ ನರೇಂದ್ರ ಮೋದಿ ಮೂರು ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದು ಅರುಣ್ ಜೇಟ್ಲಿ ಉಸ್ತುವಾರಿಯಿಂದ.
ಕರ್ನಾಟಕದಲ್ಲಿ ಬಿಜೆಪಿ ಬೆಳೆವಣಿಗೆ ಅವರ ಕೊಡುಗೆ ದೊಡ್ಡದಿದೆ. ಕಾನೂನು ಸಚಿವರಾಗಿ, ಹಣಕಾಸು ಸಚಿವರಾಗಿ ಜೇಟ್ಲಿ ಕೊಡುಗೆ ಅಪಾರ. ಭಗವಂತ ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಹುಬ್ಬಳ್ಳಿಯಲ್ಲಿ ಸಚಿವ ಜಗದೀಶ್ ಶೆಟ್ಟರ್ ಸಂತಾಪ ಸೂಚಿಸಿದ್ದಾರೆ.
ಜೇಟ್ಲಿ ಮತ್ತು ತಮ್ಮ ನಡುವಿನ ಒಡನಾಟ ನೆನೆದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಜಿಎಸ್ಟಿಟ್ ಜಾರಿ ಮತ್ತು ಅನುಷ್ಠಾನದಲ್ಲಿ ಜೇಟ್ಲಿ ಕೊಡುಗೆ ಮಹತ್ವದ್ದು. ಜೇಟ್ಲಿ ಅತ್ಯಂತ ಮೇರು ವ್ಯಕ್ತಿತ್ವದ ರಾಜಕಾರಣಿ. ಪಕ್ಷ ಭೇದವಿಲ್ಲದೆ ಸ್ನೇಹಿತರ ಬಳಗವನ್ನು ಸಂಪಾದಿಸಿದ್ದರು. ಅರುಣ್ ಜೇಟ್ಲಿ ಅವರ ಆತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ. ಅವರ ಕುಟುಂಬ ಸದಸ್ಯರಿಗೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ. ಸಂಸತ್ತು ಇವತ್ತು ದೊಡ್ಡ ವ್ಯಕ್ತಿತ್ವವನ್ನು ಕಳೆದುಕೊಂಡಿದೆ. ಮೂರು ಬಾರಿ ಅರುಣ್ ಜೇಟ್ಲಿ ರಾಜ್ಯ ಉಸ್ತುವಾರಿ ವಹಿಸಿಕೊಂಡಿದ್ದರು. ನಾನು ಬಿಜೆಪಿ ಅಧ್ಯಕ್ಷನಾದಗ ನನಗೆ ಮಾರ್ಗದರ್ಶನ ಮಾಡಿದ್ರು ಎಂದು ನೆನೆದರು.
ಜೇಟ್ಲಿ ಆಗಲಿಕೆಗೆ ಸಂಕೇಶ್ವರ್ ಮಾಜಿ ಸಂಸದ ವಿಜಯ ಕಂಬನಿ ಮಿಡಿದಿದ್ದಾರೆ. ವಾಜಪೇಯಿ ಸರ್ಕಾರದಲ್ಲಿ ಕಾನೂನು ಸಚಿವರಾಗಿ ಮಾಡಿದ ಕೆಲಸ ಅತ್ಯುತ್ತಮ. ಅತ್ಯಂತ ಸರಳ ವ್ಯಕ್ತಿತ್ವದ ನಾಯಕ ಅರುಣ್ ಜೇಟ್ಲಿ. ದೂರದೃಷ್ಟಿಯುಳ್ಳ ಅರ್ಥಿಕ ನೀತಿ ರೂಪಿಸಿದ ನಾಯಕ. ಜೇಟ್ಲಿಯವರು ನನಗಿಂತ ವಯಸ್ಸಿನಲ್ಲಿ ಚಿಕ್ಕವರು. ಅವರ ಅಗಲಿಕೆ ನನಗೆ ನೋವುಂಟು ಮಾಡಿದೆ. ಅಷ್ಟೇ ಅಲ್ಲ ಅವರ ಆಗಲಿಕೆ ದೇಶಕ್ಕಾದ ದೊಡ್ಡ ನಷ್ಟ ಎಂದು ನೆನೆದರು.
ಸಿಎಂ ಯಡಿಯೂರಪ್ಪ ಅರುಣ್ ಜೇಟ್ಲಿ ಅವರ ಅಗಲಿಕೆಗೆ ಸಂತಾಪ ಸೂಚಿಸಿದರು.
ಪ್ರಧಾನಿ ನರೇಂದ್ರ ಮೋದಿ ಕೂಡ ಅಗಲಿಕೆಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.