ಇಲ್ಲಿ ಮುಸ್ಲಿಂರು ತಯಾರಿಸಿದ ಅನ್ನವೇ ಮಹಾ ಗಣಪನಿಗೆ ನೈವೇದ್ಯ…
ಇಲ್ಲಿ ಮುಸ್ಲಿಂರು ತಯಾರಿಸಿದ ಅನ್ನವೇ ಮಹಾ ಗಣಪನಿಗೆ ನೈವೇದ್ಯ. ಆಶ್ಚರ್ಯ ಅನಿಸುತ್ತಿದ್ದರೂ ಇದು ನಿಜನೇ.
ಹೌದು.. ಇಲ್ಲಿ ಕೇಸರಿ ಶಾಲು ಹೊತ್ತ ಮುಸ್ಲಿಂರಿಂದಲೇ ಗಣಪತಿಗೆ ಮಹಾ ಮಂಗಳಾರತಿಯಾಗುತ್ತೆ. ಗಣಪತಿ ಭಪ್ಪ ಮೋರಾಯ ಎಂಬ ಘೋಷಣೆಗಳೊಂದಿಗೆ ಪೂಜಾ ಕಾರ್ಯದಲ್ಲಿ ಮುಸ್ಲಿಂರು ಭಾಗಿಯಾಗುತ್ತಾರೆ. ಬಾಗಲಕೋಟೆಯ ಜಮಖಂಡಿಯಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಮಹಾಗಣಪತಿ ಉತ್ಸವ ಮಾಡಲಾಯ್ತು.
ಹಿಂದೂಗಳೊಂದಿಗೆ ಕೊರಳಿಗೆ ಕೇಸರಿ ಶಾಲು ಹಾಕಿ ಮಹಾಗಣಪತಿಗೆ ಆರತಿ ಎತ್ತಿ ಮುಸ್ಲಿಂ ಬಾಂಧವರು ಪೂಜೆ ಮಾಡಿದರು. ಇತ್ತ ಮಹಾಗಣಪತಿಗೆ ಇಂದು ಮುಸ್ಲಿಮರು ತಯಾರಿಸಿದ ಪ್ರಸಾದವೇ ನೈವೇದ್ಯವಾಗಿದೆ. ಏಕಕಾಲಕ್ಕೆ ೧೦ ಸಾವಿರ ಭಕ್ತರಿಗೆ ಮುಸ್ಲಿಂ ಬಾಂಧವರು ಅನ್ನ ಸಂತಪ೯ಣೆ ನಡೆಸಿದರು.
೪ ಕ್ವಿಂಟಲ್ ಅಕ್ಕಿಯಿಂದ ಅನ್ನ, ಕೇಸರಿ ಬಾತ್ ಸೇರಿ ಹಲವು ಖಾದ್ಯದ ಅನ್ನ ಸಂತಪ೯ಣೆ ಮಾಡಿದ್ದಾರೆ. ಇತ್ತ ಗಣಪತಿಗೆ ಬಂದ ದೇಣಿಗೆಯನ್ನೂ ನೆರೆ ಪೀಡಿತ ಸಂತ್ರಸ್ಥರಿಗೆ ನೀಡಲು ಯುವಕರು ಮುಂದಾಗಿದ್ದಾರೆ. ಹಿಂದೂ- ಮುಸ್ಲಿಮರು ಒಂದಾಗಿ ಗಣೇಶ್ ಉತ್ಸವದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.