ಕಣ್ಣಿರು ನಿಮ್ಮ ಕುಟುಂಬದ ಪೇಟೆಂಟ್ : ಸದಾನಂದಗೌಡರು ವ್ಯಂಗ್ಯ – HDK ಕೆಂಡಮಂಡಲ

ಹೌದು ಕಣ್ಣಿರು ನಮ್ಮ ಕುಟುಂಬದ ಪೇಟೆಂಟ್. ಸದಾನಂದಗೌಡರ ಥರ ಎಲ್ಲದಕ್ಕು ಹಲ್ಲು ಬಿಟ್ಟುಕೊಂಡು ನಿಂತುಕೊಳ್ಳೋದಲ್ಲ. ಕಣ್ಣಿರಿನ ಬಗ್ಗೆ ವ್ಯಂಗ್ಯ ಮಾಡಿದ್ದಕ್ಕೆ ಮಾಜಿ ಸಿಎಂ ಕುಮಾರ‌ಸ್ವಾಮಿ ಕೆಂಡಮಂಡಲವಾದರು.

ಸದಾನಂದಗೌಡರೇ ವಿಕ್ಸ್ ಗ್ಲೀಸರಿನ್ ಹಾಕಿಕೊಂಡು ಕಣ್ಣಿರು ಹಾಕೋ ಅವಶ್ಯಕತೆ ನನಗೆ ಇಲ್ಲ. ಬಡವರ ಕಷ್ಟ ನೋಡಿದ ತಕ್ಷಣ ನನಗೆ ಕಣ್ಣಿರು ಬರುತ್ತೆ.  ನೀವು ಬಂದಿರೋದು ನಾಟಕ ಆಡೋ ಕಡೆಯಿಂದ. ನಿಮಗೆ ಮಾನವೀಯತೆ ಗೊತ್ತಿದ್ರೆ ತಾನೆ ಕಣ್ಣಿರು ಬರೋದು. ಎಷ್ಟು ಜನ ಬಡವರು ನಿಮ್ ಮನೆ ಹತ್ರ ಬರ್ತಾರೆ‌.? ನಿಮ್ಮ ಕೇಂದ್ರದ ಗೂಢಾಚಾರಿಗಳನ್ನ ಕಳುಹಿಸಿ ನಮ್ಮ ಮನೆ ಹತ್ರ ಕಳುಹಿಸಿ ಆಗಾ ಗೊತ್ತಾಗುತ್ತೆ. ನನ್ನದು ಡ್ರಾಮಾ ಕಣ್ಣಿರಲ್ಲ. ನಿಮ್ಮಿಂದ ನಾನು ಪಾಠ ಕಲಿಯಬೇಕಿಲ್ಲ. ಪ್ರವಾಹದ ಎಷ್ಟು ಹಳ್ಳಿಗಳಿಗೆ ಹೋಗಿದ್ರಿ. ಯೇಸ್ ನಾನು ಕಣ್ಣಿರು ಹಾಕ್ತಿನಿ ಅದು‌ ಜನರಿಗಾಗಿ ಹಾಕೋ ಕಣ್ಣಿರು. ನಿಮಗೆ ಹೃದಯ ಇದ್ರೆ ತಾನೆ ಕಣ್ಣಿರು ಬರೋದು. ನಿಮಗೆ ಬೇಕಾಗಿರೋದು ಗ್ಲೀಸರಿನ್ ವಿಕ್ಸು ಬೇಕು. ಸದಾನಂದಗೌಡರನ್ನಾಗಲಿ ಬಿಜೆಪಿಯವರನ್ನಾಗಿ ಮೆಚ್ಚಿಸೋಕೆ ನಾನು ಬದುಕಿಲ್ಲ ಎಂದು ಕಿಡಿ ಕಾರಿದರು.

ನಾನು ಹೋಟೆಲ್‌ನಲ್ಲಿ ಇರೋ ಕಥೆ ಹೇಳ್ತಿರಲ್ಲ ಬಿಜೆಪಿಯವರೇ. ನಿಮ್ಮ ಅರವಿಂದ ಲಿಂಬಾವಳಿ ಮಾಡಿರೋ ಮಹಾನ್ ಕಾರ್ಯ ಮಾಡಿರೋದು ಗೊತ್ತಿಲ್ವಾ ಎಂದು ಬಿಜೆಪಿಯವರ ವಿರುದ್ದ  ಹೆಚ್‌ಡಿಕೆ ಗುಡುಗಿದರು. ಮೊನ್ನೆ ನಿಮ್ಮ ಪಕ್ಷ ಸೇರಿದ ಎಂಎಲ್‌ಎ ಮಾಡಿರೋ ಕೆಲಸ ನೋಡಬೇಕು. ಗಂಧದ ಕಡ್ಡಿ ಹಚ್ಚಿ ಕೈ ಮುಗಿಬೇಕು ಅಂತ ಕೆಲಸ ಮಾಡಿದ್ದಾನೆ. ಆತನಿಂದ ಯಾರೋ ಹುಡುಗ ಜೈಲಿಗೆ ಹೋಗಿದ್ದಾನೆ. ಜೀವನದಲ್ಲಿ ಹೇಗಿರಬೇಕು ಅಂತ ನಿಮ್ಮಿಂದ ಪಾಠ ಕಲಿಯಬೇಕಿಲ್ಲ ಎಂದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights