ಕರುನಾಡಿಗೆ ಕೊರೊನಾಘಾತ : 24 ಗಂಟೆಯಲ್ಲಿ ಹೊಸದಾಗಿ 248 ಕೇಸ್!
ರಾಜ್ಯದಲ್ಲಿ ಕೊರೊನಾ ಅಟ್ಟ ಹಾಸ ಮುಂದುವರೆದಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕಳೆದ 24 ಗಂಟೆಗಳಲ್ಲಿ 248 ಕೇಸ್ ದಾಖಲಾಗಿದ್ದು ಅಘಾತವನ್ನುಂಟು ಮಾಡಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು 2,781 ಕೇಸ್ ದಾಖಲಾಗಿವೆ.
ಹೌದು…ಕರುನಾಡಿಗೆ ಅನ್ಯ ರಾಜ್ಯಗಳ ಕಂಟಕ ಶುರುವಾಗಿದ್ದು ಮಹಾರಾಷ್ಟ್ರ ಹಾಗೂ ಮುಂಬೈಯಿಂದ ಬಂದವರಲ್ಲಿ ಇಂದು ಹೆಚ್ಚು ಕೊರೊನಾ ವೈರಸ್ ಕಾಣಿಸಿಕೊಂಡಿದೆ. ಇಂದು ದಾಖಲಾದ 248 ಕೇಸ್ ಗಳಲ್ಲಿ ಬಹುತೇಕ ಸೋಂಕಿತರಿಗೆ ಮಹಾರಾಷ್ಟ್ರ ಲಿಂಕ್ ಇದೆ. ಇವತ್ತು 15 ವರ್ಷದ ಒಳಗಿನ ಒಟ್ಟು 35 ಮಕ್ಕಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಇಂದು ಸಂಜೆ ಬಿಡುಗಡೆಯಾದ ಹೆಲ್ತ್ ಬುಲೆಟಿನ್ ನಲ್ಲಿ 248 ಮಂದಿಗೆ ಸೋಂಕು ದೃಢವಾಗಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್ ಪ್ರಕಾರ, ಇಂದು ಚಿಕ್ಕಬಳ್ಳಾಪುರ 5, ಬೆಂಗಳೂರು ಗ್ರಾಮಾಂತರ 1, ಬೆಂಗಳೂರು 12, ಮೈಸೂರು 2, ಚಿತ್ರದುರ್ಗ 1, ಶಿವಮೊಗ್ಗ 1, ರಾಯಚೂರು 62, ಯಾದಗಿರಿ 60, ಮಂಡ್ಯ 2, ಕಲಬುರಗಿ 61, ಉಡುಪಿ 15, ಧಾರವಾಡ 1, ದಾವಣಗೆರೆ 4, ಹಾಸನ 4, ವಿಜಯಪುರ 4, ಬಳ್ಳಾರಿ 9, ತುಮಕೂರು 2, ಚಿಕ್ಕಮಗಳೂರು 2 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ.
ರಾಜ್ಯದಲ್ಲಿ ಒಟ್ಟು 2,781 ಕೇಸ್ ದಾಖಲಾಗಿಗಿದ್ದು, ಇವರಲ್ಲಿ 48 ಜನ ಸಾವನ್ನಪ್ಪಿದ್ದಾರೆ. ಇಂದು ಒಟ್ಟು 60 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ 894 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ.