ಕಳ್ಳರ ಕೈಚಳಕ ಯತ್ನ ವಿಫಲ, ಸಿಸಿಟಿವಿ ಯಲ್ಲಿ ದೃಶ್ಯಗಳು ಸೆರೆ…!
ಕಳ್ಳರ ಕೈಚಳಕ ಯತ್ನ ವಿಫಲವಾಗಿ ಈ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರಿನ ಕಂಟಿ ಬೀರೇಶ್ವರ ನಗರದಲ್ಲಿ ನಡೆದಿದೆ.
ಹೌದು.. ಖದೀಮರು ಶೈಲಜಾ ಬಣಕಾರ ಎಂಬುವರ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಮನೆಯ ಬಾಗಿಲ ಚೀಲಕ ಮುರಿದು ಒಳಗೆ ನುಗ್ಗಿದ ಖದೀಮರು, ಕೈಗೆ ಏನೂ ಸಿಗದೇ ಮನೆ ಒಳಗಿನ ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಿ ಪರಾರಿಯಾಗಿದ್ದಾರೆ. ಮನೆ ಬಾಗಿಲಿಗೆ ಆಗಮಿಸಿದ ಖದೀಮರ ಹಾಗೂ ಒಳಪ್ರವೇಶಿದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಇನ್ನೊಂದೆಡೆ ಅಂಗಡಿ ಬಾಗಿಲು ಮುರಿದು ಎಸ್ಕೇಪ್ ಆಗಿದ್ದಾರೆ. ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶೈಲಜಾ ಬಣಕಾರ ಎಂಬುವರ ಮನೆಯಲ್ಲಿ ಕಳ್ಳತನಕ್ಕೆ ಪ್ರಯತ್ನಿಸಿರುವ ಹಿನ್ನೆಲೆಯಲ್ಲಿ ಜನ ಆತಂಕಗೊಂಡಿದ್ದಾರೆ.
ರಾಣೇಬೆನ್ನೂರ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.