ಕಾವೇರಿ ನದಿ ದಂಡೆಯಲ್ಲಿ ಹೊಸ ವರ್ಷದ ಮೋಜುಮಸ್ತಿಗೆ ಬ್ರೇಕ್….
ಹೊಸ ವರ್ಷದ ಆರಂಭವನ್ನ ಸ್ವಾಗತಿಸಲು ಕೆಲ ಸ್ಥಳಗಳ ಆಯ್ಕೆ ಮಾಡಿಕೊಳ್ಳುವವರು ಸ್ವಲ್ಪ ಇತ್ತ ಗಮನ ಹರಿಸಿ. ಯಾಕಂದ್ರೆ ನೀವೇನಾದ್ರು ಕಾವೇರಿ ನದಿ ದಂಡೆಯನ್ನು ಹೊಸವರ್ಷದ ಆಚರಣೆಗೆ ಆಯ್ಕೆ ಮಾಡಿಕೊಳ್ಳುವವರಾಗಿದ್ರೆ ಆ ಸ್ಥಳವನ್ನ ಬದಲಾಯಿಸಿಬಿಡಿ.
ಕಾವೇರಿ ನದಿ ದಂಡೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯ ಮೋಜುಮಸ್ತಿಗೆ ಬ್ರೇಕ್ ಹಾಕಲಾಗಿದೆ.
ಹೌದು.. ಕಾವೇರಿ ನದಿ ದಂಡೆಯಪ್ರವಾಸಿ ತಾಣಗಳು ಸೇರಿ ಕೆಲ KRS ಹಿನ್ನೀರಿನ ಬಳಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಶ್ರೀರಂಗಪಟ್ಟಣ ಹಾಗೂ ಮಳವಳ್ಳಿ ಈ ಎರಡು ತಾಲೂಕಿನ ದಂಡಾಧಿಕಾರಿಗಳು ಕಾವೇರಿ ನದಿ ದಂಡೆಯ ಪ್ರವಾಸಿ ತಾಣಗಳಲ್ಲಿ ೧೪೪ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಶ್ರೀರಂಗಪಟ್ಟಣ ತಾಲೂಕಿನ ಬಲಮುರಿ, ಎಡಮುರಿ, ಹಿನ್ನೀರಿನಲ್ಲಿ ಜೊತೆಗೆ ಮಳವಳ್ಳಿ ತಾಲೂಕಿನ ಮುತ್ತತ್ತಿ ಸೇರಿ ಹಲವಡೆ ನಿಷೇಧಾಜ್ಞೆ ಹೊರಡಿಸಲಾಗಿದೆ. ಜೀವಾಪಾಯದ ಅವಘಡ ಸಂಭವಿಸುವ ಮುನ್ನೆಚ್ಚರಿಕೆಯಿಂದ ನಿರ್ಬಂಧ ನಿಷೇಧಾಜ್ಞೆ ಹೇರಲಾಗಿದೆ ಎಂದು ತಾಲೂಕಿನ ದಂಡಾಧಿಕಾರಿಗಳು ತಿಳಿಸಿದ್ದಾರೆ.