ಕುಡುಕ ಮಗನಿಂದ ತಂದೆಯ ಕೊಲೆ : ಹೆತ್ತ ತಂದೆಯನ್ನು ಕೊಡಲಿಯಿಂದ ಕೊಚ್ಚಿದ ಮಗ..!
ಹೆತ್ತ ತಂದೆಯನ್ನು ಮಗನೇ ಕೊಡಲಿಯಿಂದ ಕೊಚ್ಚಿ ಕೊಂದ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕೊನ ಟಾಕಳಿ ಗ್ರಾಮದಲ್ಲಿ ನಡೆದಿದೆ.
ಅಣ್ಣಪ್ಪ ತೊರವಿ( 55 ) ಕೊಲೆಯಾದ ತಂದೆ. ಪುತ್ರ ಸಂಜೀವ ತೊರವಿ( 38 ) ಹೆತ್ಯ ತಂದೆಯನ್ನು ಕೊಲೆ ಮಾಡಿದ ಮಗ.
ಸದಾ ಕಾಲ ಮಧ್ಯ ವ್ಯಸನಿಯಾಗಿದ್ದ ಸಂಜೀವ ತೊರವಿಯಿಂದ ಕುಟುಂಬದವರು ರೋಸಿ ಹೋಗಿದ್ದರು. ನಿನ್ನೆ ಸಂಜೆ ಸಂಜೀವ ತೊರವಿ ತನ್ನ ಪತ್ನಿ ಜೊತೆಗೆ ಕುಡಿದ ಮತ್ತಿನಲ್ಲಿ ಜಗಳ ಮಾಡುತ್ತಿದ್ದ, ಆಗ ಜಗಳ ಬಿಡಿಸಲು ಬಂದ ತಂದೆಯ ಹತ್ಯೆ ಮಾಡಿದ್ದಾನೆ ಪಾಪಿ ಪುತ್ರ.
ಆರೋಪಿ ಸಂಜೀವ ಪೊಲೀಸರ ವಶದಲ್ಲಿದ್ದು, ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.