ಕೆಆರ್,ಪೇಟೆ ಉಪ ಚುನಾವಣೆ ಹಿನ್ನೆಲೆ : ಬಿಜೆಪಿ ಜೆಡಿಎಸ್ ನಡುವೆ ಮಾರಾಮಾರಿ
ಕೆಆರ್,ಪೇಟೆ ಉಪ ಚುನಾವಣೆ ಹಿನ್ನೆಲೆ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮಾರಾಮಾರಿಯಾದ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ನಂಬಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹೌದು… ಮಾಜಿ ಪ್ರಧಾನಿ ಹೆಚ್, ಡಿ,ದೇವೇಗೌಡ ಮತ್ತು ಮಾಜಿ ಸಚಿವ ಹೆಚ್,ಡಿ,ರೇವಣ್ಣ ಪುತ್ರ ಡಾ,ಸೂರಜ್ ರೇವಣ್ಣ ವಿರುದ್ದ ಎಫ್ ಐಆರ್ ದಾಖಲಾಗಿದೆ. ಬಿಜೆಪಿ ಕಾರ್ಯಕರ್ತರಿಂದ ಸೂರಜ್ ರೇವಣ್ಣ ಮತ್ತು ಬೆಂಬಲಿಗರ ವಿರುದ್ದ ಕೊಲೆ ಯತ್ನ ದೂರು ದಾಖಲಾಗಿದೆ. ಸೂರಜ್ ರೇವಣ್ಣ ಐದು ಮಂದಿ ಬೆಂಬಲಿಗರ ವಿರುದ್ದ ಎಫ್ ಐ ಆರ್ ದಾಖಲಾಗಿದೆ.
ಸಂತೋಷ್ ಮತ್ತು ಗಿರೀಶ್, ಇತ್ತೀಚಿಗೆ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಕೆಆರ್,ಪೇಟೆ ಉಪ ಚುನಾವಣೆಗೆ ನಂಬಿಹಳ್ಳಿಯ ಸಂತೋಷ್ ರ ತೋಟದ ಮನೆಯಿಂದ ಹಣ ಹಂಚುತ್ತಿದ್ದಾರೆಂದು ನಾಲ್ವರು ಬಿಜೆಪಿ ಕಾರ್ಯಕರ್ತರ ಮೇಲೆ ಸೂರಜ್ ರೇವಣ್ಣ ಬೆಂಬಲಿಗರು ಹಲ್ಲೆ ಯತ್ನ ನಡೆಸಿದ್ದಾರೆಂದು ಆರೋಪಿಸಲಾಗಿದೆ.
ತೋಟದ ಮನೆಯಿಂದ ಕೆಆರ್ ಪೇಟೆಗೆ ಹಣ ಸಾಗಿಸುತ್ತಿದ್ದಾರೆಂದು ಮನೆ ಮೇಲೆ ಸೂರಜ್ ರೇವಣ್ಣ ಬೆಂಬಲಿಗರು ದಾಳಿ ಮಾಡಿದ್ದಾರೆ. ಸೂರಜ್ ರೇವಣ್ಣ, ಮೋಹನ, ಸುಮಂತ, ಮಂಜು ಅಲಿಯಾಸ್ ಚಿಟ್ಟೆ ಮಂಜು, ಪ್ರದೀಪ್ ಮತ್ತು ಕಿರಣ ಎಂಬುವರ ವಿರುದ್ದ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ ಐಅರ್ ದಾಖಲಾಗಿದೆ.
ಬಿಜೆಪಿ ಪಕ್ಷಕ್ಕೆ ಸೇರುತ್ತಿದ್ದೀರಿ ಎಂದು ಯುವಕರ ಮೇಲೆ ಹಲ್ಲೆ ಮಾಡಿರುವ ಆರೋಪ ಜೊತೆಗೆ ನವೀನ್ ಮತ್ತು ಆನಂದ್ ಬೆಂಗಳೂರಿನಿಂದ ಬಂದು ಹಣ ಹಂಚುತ್ತಿದ್ದಾರೆಂದು ಆರೋಪ ಮಾಡಲಾಗಿದೆ.