ಕೊರೊನಾ ವಿರುದ್ದದ ಹೋರಾಟಕ್ಕೆ 20 ಲಕ್ಷ ನೀಡಿದ ಮಲ್ಟಿಫ್ಲೆಕ್ಸ್ ಸಮೂಹ ಸಂಸ್ಥೆ
ಕೊರೊನಾ ವೈರಸ್ ನಿಯಂತ್ರಣಕ್ಕೆ 21 ದಿನಗಳ ದೇಶಾದ್ಯಂತ ಲಾಕ್ಡೌನ್ ಘೋಷಿಸಲಾಗಿದೆ. ಈ ಹಿನ್ನಲೆಯಲ್ಲಿ ಆರ್ಥಿಕ ಬಿಕ್ಕಟ್ಟು ಕೂಡ ಎದುರಾಗಿದ್ದು, ಕೊರೊನಾ ವಿರುದ್ಧದ ಹೋರಾಟಕ್ಕೆ ಸರ್ಕಾರದೊಂದಿಗೆ ಕೈಜೋಡಿಸಿ, ನೆರವು ನೀಡುವಂತೆ ಪ್ರಧಾನಿ ಮೋದಿ ಮತ್ತು ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರು ಮನವಿ ಮಾಡಿದ್ದರು. ಪ್ರಧಾನಮಂತ್ರಿಯ ಮನವಿಗೆ ಓಗೊಟ್ಟು ಸಿನಿಮಾ ಸ್ಟಾರ್ಗಳು, ಕ್ರಿಕೆಟಿಗರು, ಉದ್ದಿಮೆದಾದರು ಧನ ಸಹಾಯ ಮಾಡುತ್ತಿದ್ದಾರೆ.
ಕರ್ನಾಕಟದಲ್ಲಿಯೂ ಸಹಾಯದ ಮಹಾಪೂರವೇ ಹರಿದು ಬರುತ್ತಿದ್ದು, ಬೆಂಗಳೂರಿನ ಮಲ್ಟಿಫ್ಲೆಕ್ಸ್ ಬಯೋಟೆಕ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯು 20 ಲಕ್ಷ ದೇಣಿಗೆ ನೀಡಿದೆ.
“ಕೊರೊನಾ ವೈರಸ್ ದೇಶಾದ್ಯಂತ ತಾಂಡವವಾಡುತ್ತಿರುವ ಈ ಸಂದರ್ಭದಲ್ಲಿ ದೇಶದ ಜನರಿಗೆ ನೆರವಾಗುವುದು, ದೇಶದ ಜೊತೆಗೆ ನಿಲ್ಲುವುದು ನಮ್ಮ ಕರ್ತವ್ಯವಾಗಿದೆ. ಒಂದು ಸಂಸ್ಥೆ ಆರ್ಥಿಕ ಲಾಭದ ಜೊತೆಗೆ ಸಾಮಾಜಿಕ ಕಳಕಳಿಯನ್ನು ಹೊಂದಿರಬೇಕು. ಹಾಗಾಗಿ ಮಲ್ಟಿರ್ಫಲೆಕ್ಸ್ ಸಮೂಹ ಸಂಸ್ಥೆಯು ದೇಶದ ಜನರ ಸಂಕಷ್ಟಕ್ಕೆ ನೆರವಾಗಲಿದೆ” ಎಂದು ಮಲ್ಟಿಫ್ಲೆಕ್ಸ್ ಸಮೂಹ ಸಂಸ್ಥೆಗಳ ಉಪಾಧ್ಯಕ್ಷ ಜಿ.ಕೆ ನಾರಾಯಣಸ್ವಾಮಿ ತಿಳಿಸಿದ್ದಾರೆ.
ಮಲ್ಟಿಫ್ಲೆಕ್ಸ್ ಸಮೂಹ ಸಂಸ್ಥೆಯು ಕೇಂದ್ರದ ಪಿ.ಎಂ ಕೇರ್ಸ್ ಪರಿಹಾರ ನಿಧಿಗೆ 10 ಲಕ್ಷ ಹಾಗೂ ಕರ್ನಾಟಕದ ಮುಖ್ಯಮಂತ್ರಿಗಳ ಕೊವಿಡ್-19 ಪರಿಹಾರ ನಿಧಿಗೆ 10 ಲಕ್ಷ ರೂಗಳ ದೇಣಿಗೆ ನೀಡಿದೆ.