ಕೋಲ್ಹಾರ ಸೇತುವೆ ಮೇಲೆ ನಿನ್ನೆ ತಡರಾತ್ರಿ ಸರಣಿ ಅಪಘಾತ : ಸ್ಥಳದಲ್ಲಿಯೇ ಇಬ್ಬರು ಸಾವು

ವಿಜಯಪುರದತ್ತ ಹೊರಟಿದ್ದ ಲಾರಿಗೆ ಹಿಂಬದಿಯಿಂದ ಬಂದ ಟಿಪ್ಪರ್ ಡಿಕ್ಕಿ, ಟಿಪ್ಪರ್ ಗೆ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ಕೋಲ್ಹಾರ ಪಟ್ಟಣದ ಬಳಿ ಇರುವ ಸೇತುವೆ ಮೇಲೆ‌ ನಡೆದಿದೆ.

ಬಾಗಲಕೋಟೆ ಕಡೆಯಿಂದ ಹೊರಟಿದ್ದ ಮೂರು ವಾಹನಗಳು ಒಂದಕ್ಕೊಂದು ಹಿಂಬದಿಯಿಂದಲೇ‌ ಡಿಕ್ಕಿ ಹೊಡೆದ ಪರಿಣಾಮ‌ ನಡೆದ ಸರಣಿ ಅಪಘಾತವಾಗಿದೆ. ಟಿಪ್ಪರ್ ಚಾಲಕ ಸೇರಿ ಮೂವರಿಗೆ ಗಾಯಗಳಾಗಿದ್ದು, ಗಾಯಾಳುಗಳು ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ವೇಳೆ ಸಿಲುಕಿದ್ದ ಟಿಪ್ಪರ್ ಚಾಲಕನನ್ನು ಹೊರ ತೆಗೆಯಲು ನಡೆದ ಹರಸಾಹಸ ಪಡಬೇಕಾಯಿತು.

ಸೇತುವೆ ಮೇಲೆ ಅಪಘಾತ ಸಂಭಂವಿಸಿದ ಕಾರಣ ಕೆಲಕಾಲ ಸಂಚಾರಕ್ಕೆ ಅಸ್ತವ್ಯಸ್ತವಾಗಿತ್ತು. ಸ್ಥಳಕ್ಕೆ ಧಾವಿಸಿದ ಕೋಲ್ಹಾರ ಠಾಣೆ ಪೊಲೀಸರು ರಸ್ತೆ ಮೇಲಿದ್ದ ವಾಹನಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಅಪಘಾತದಲ್ಲಿ ಸಾವಿಗೀಡಾದವರ ಗುರುತು ಪತ್ತೆಯಾಗಿಲ್ಲ. ವಿಜಯಪುರ ಜಿಲ್ಲೆಯ ಕೋಲ್ಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights