“ಗಲಾಟೆ ಮಾಡುವಂತವರನ್ನು ಬೆತ್ತಲೆ ಮಾಡಿ ಏರಿಯಾ ಸುತ್ತಾಡಿಸಿ”- ಪ್ರಮೋದ್ ಮುತಾಲಿಕ್
ಪಾದರಾಯನಪುರದಲ್ಲಿ ತಡರಾತ್ರಿ ನಡೆದ ಗಲಾಟೆ ವಿಚಾರಕ್ಕೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಾತನಾಡಿ ಮಾಜಿ ಸಚಿವ ಜಮೀರ್ ಅಹ್ಮದ್ ವಿರುದ್ಧ ಗಿಡಿ ಕಾರಿದ್ದಾರೆ.
ಪಾದರಾಯನಪುರದಲ್ಲಿ ವಾಲೆಂಟಯರ್ಸ್ ಹಾಗೂ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಪುಂಡರ ಗಲಾಟೆ ವಿರುದ್ಧ ಮುತಾಲಿಕ್ ಸಿಡಿದೆದ್ದಿದ್ದಾರೆ. ” ರಾತ್ರಿ 9 ಗಂಟೆಗೆ ಒಮ್ಮೆಲೆ ಬಂದು ಜನ ಗಲಾಟೆ ಮಾಡ್ತಾರೆ ಅಂದ್ರೆ ಯಾರೋ ಕೊಟ್ಟಿರೋ ಸಲಿಗೆ ಅದು. ಈ ಕುತಂತ್ರ ಹಿಂದೆ ಜಮೀರ್ ಅಹ್ಮದ್ ಇದ್ದಾರೆ. ತಮ್ಮ ಕ್ಷೇತ್ರದಲ್ಲಿ ಆದ ಘಟನೆಯ ಬಗ್ಗೆ ಗಮನ ಇಲ್ವಾ? ಇದಕ್ಕೆ ಜಮೀರ್ ಅವರೇ ಕಾರಣ ಕರ್ತರು. ತಮ್ಮ ಕ್ಷೇತ್ರದಲ್ಲೇ ಇದ್ದ ಜಮೀರ್ ನಿನ್ನೆ ರಾತ್ರಿ ಪ್ರತ್ಯಕ್ಷ ಆಗಿಲ್ಲ ಇವತ್ತು ಬೆಳಿಗ್ಗೆ ಪ್ರತ್ಯಕ್ಷ ಆಗಿದ್ದಾರೆ. ಜಮೀರ್ ಏನ್ ಕತ್ತೆ ಕಾಯುತ್ತಿದ್ದಾರೆ ಜಾಗೃತ ಮೂಡಿಸೋದು ಬಿಟ್ಟು ?” ಎಂದು ಪ್ರಶ್ನೆ ಮಾಡಿದ್ದಾರೆ.
“ಗಲಾಟೆ ಮಾಡುವಂತವರನ್ನು ಬೆತ್ತಲೆ ಮಾಡಿ ಏರಿಯಾ ಸುತ್ತಾಡಿಬೇಕು. ಜಾಗೃತಿ ಮೂಡಿಸುವುದಕ್ಕೆ ಡಾಕ್ಟರೇ, ಪೊಲೀಸರೇ ಬೇಕಾದರೆ ಇವರೇನಕ್ಕೆ ಬೇಕು? ಒಂದು ತಿಂಗಳಿಂದ ಎಲ್ಲಾ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಈಗ ಗೊತ್ತಿಲ್ಲ ಅಂದರೆ. ಇಸ್ಲಾಂ ಅಂದರೆ ಶಾಂತಿ ಅಂತೀರಾ ಇದೇನಾ ಶಾಂತಿ ಎಂದು ಪ್ರಶ್ನಿಸಿದ್ದಾರೆ. ಸರ್ಕಾರ ಕೂಡ ಇಂತಹರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಇನ್ನೂ ಈ ಘಟನೆ ಬಗ್ಗೆ ಜಮೀರ್ ಅಹ್ಮದ್ ಮಾತನಾಡಿ, “ಪಾದರಾಯನಪುರದಲ್ಲಿ ಇರುವ ಎಲ್ಲರೂ ಅನಕ್ಷರಸ್ಥರು ಇದ್ದಾರೆ. ಅವರಿಗೆ ಜಾಗೃತಿ ಮೂಡಿಸಿ ನಾಳೆ ಕರೆದುಕೊಂಡು ಹೋಗಲು ನಾನು ಹೇಳಿದ್ದೆ. ಆದರೆ ಅವರು ರಾತ್ರಿ ಹೋಗಿದ್ದಾರೆ. ಹೀಗಾಗಿ ಗಲಾಟೆ ಆಗಿದೆ. ಹೀಗೆ ಆಗಬಾರದಿತ್ತು. ಗಲಾಟೆ ಮಾಡಿದವರಿಗೆ ಶಿಕ್ಷೆ ನೀಡಿ. ಅದು ತಪ್ಪು ಎಂದು ನಾನು ಹೇಳುತ್ತೇನೆ” ಎಂದು ಹೇಳಿದ್ದಾರೆ.