ಗ್ರಾಮಕ್ಕೆ ನುಗ್ಗಿ ಕುರಿ ತಿಂದು ಹಾಕಿದ ಚಿರತೆ : ಆತಂಕದಲ್ಲಿ ಸ್ಥಳೀಯರು
ಚಿರತೆಯೊಂದು ಗ್ರಾಮಕ್ಕೆ ನುಗ್ಗಿ ಕುರಿ ತಿಂದು ಹಾಕಿದ ಘಟನೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಯಲದಹಳ್ಳಿಯಲ್ಲಿ ನಡೆದಿದೆ.
ರವಿಗೌಡ ಮತ್ತು ಯೋಗಿ ಗೌಡ ಎಂಬುವರ ಮನೆಗೆ ನುಗ್ಗಿ ಕುರಿ ಹೊತ್ತೋಯ್ದು ತಿಂದು ಹಾಕಿರೋ ಚಿರತೆಯಿಂದಾಗಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ತಡರಾತ್ರಿ ಗ್ರಾಮಕ್ಕೆ ನುಗ್ಗಿ ಚಿರತೆ ನಿರ್ಜನ ಪ್ರದೇಶಕ್ಕೆ ಕುರಿ ಮರಿಯನ್ನು ಎಳೆದೊಯ್ದು ತಿಂದು ಹಾಕಿದೆ.
ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯ ಹೇರಿದ್ದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.