ಚಿಕ್ಕೋಡಿಯಲ್ಲಿ ಸಿಎಂ ಯಡಿಯೂರಪ್ಪ ಬಳಿಕ ವೀರಶೈವ ಲಿಂಗಾಯತ ಜಪ ಆರಂಭಿಸಿದ ಕಾಂಗ್ರೆಸ್…
ಸಿಎಂ ಯಡಿಯೂರಪ್ಪ ಬಳಿಕ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಕೂಡ ವೀರಶೈವ ಲಿಂಗಾಯತ ಜಪ ಆರಂಭಿಸಿದೆ. ಕಾಂಗ್ರೆಸ್ ಕಾರ್ಯಾಧ್ಯಕ್ಷರಿಂದ ಕಾಗವಾಡ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತರು ಒಂದೇ ಎನ್ನುವ ಜಪ ಶುರುವಾಗಿದೆ.
ಹೌದು.. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಉಗಾರ ಪಟ್ಟಣದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಪ್ರಚಾರದ ವೇಳೆ, ವೀರಶೈವರು ಲಿಂಗಾಯತರು ಎಲ್ಲರೂ ಒಂದೆ ಎಂದಿದ್ದಾರೆ. ವೀರಶೈವ ಲಿಂಗಾಯತ ಸಮಾಜ ಜಾತ್ಯತೀತ.
ಇನ್ನೂ ವೀರಶೈವ ಮತ ಬಿಜೆಪಿ ಬಿಟ್ಟು ಎಲ್ಲೂ ಹೋಗಬಾರದು ಎನ್ನುವ ಸಿಎಂ ಹೇಳಿಕೆ ವಿರುದ್ದ ಖಂಡ್ರೆ ಹರಿಹಾಯ್ದಿದ್ದಾರೆ. ಸಂಕುಚಿತ ಮನೋಭಾವ ಹೇಳಿಕೆಯನ್ನ ಸಿಎಂ ಕೊಟ್ಟಿದ್ದು ದುರದೃಷ್ಟಕರ. ಸಿಎಂ ಹೇಳಿಕೆ ಖಂಡನೆ ಮಾಡುತ್ತೇನೆ. ಸಿಎಂ ಈ ರೀತಿ ಮತ ಕೇಳೋದೇ ತಪ್ಪು. ಉಪ ಚುನಾವಣೆಯಲ್ಲಿ ವೀರಶೈವ ಲಿಂಗಾಯತರು ಯಾರ ಕಡೆ ಇದ್ದಾರೆ ಎಂದು ತೋರಿಸುತ್ತಾರೆ ಎಂದಿದ್ದಾರೆ.
15 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತೆ ಎನ್ನುವ ಸಿಎಂ ಯಡಿಯೂರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿಎಂ ಹೇಳಿಕೆಗೆ ನಕ್ಕು. ಸಿಎಂ ಸೋಲುವ ಭೀತಿಯಲ್ಲಿ ಏನೇನೂ ಹೇಳಿಕೆ ಕೊಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಲೆ ಇದೆ. ಕಾಗವಾಡ ಮತಕ್ಷೇತ್ರದ ರಾಜು ಕಾಗೆ ಗೆಲ್ಲುತ್ತಾರೆ. ರಾಜು ಕಾಗೆ ಕಾಂಗ್ರೆಸ್ ಪಕ್ಷದಲ್ಲಿ ಏಕಾಂಗಿ ಅಲ್ಲಾ. ಕಾಂಗ್ರೆಸ್ ಪಕ್ಷ ರಾಜು ಕಾಗೆ ಅವರ ಜೊತೆಗಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.