ಚಿರಂಜೀವಿ ಸರ್ಜಾ ಸಾವಿಗೆ ಸಂತಾಪ ಸೂಚಿಸಲು ಹೋಗಿ ಯಡವಟ್ಟು ಮಾಡಿಕೊಂಡ ಶೋಭಾ ಡೇ
ಲೇಖಕಿ, ಅಂಕಣಗಾರ್ತಿ ಶೋಭಾ ಡೇ ಅವರು ನಿನ್ನೆ ಚಿರಂಜೀವಿ ಸರ್ಜಾ ಸಾವಿಗೆ ಸಂತಾಪ ಸೂಚಿಸಿದ್ದು, ಅವರು ಚಿರಂಜೀವಿ ಸರ್ಜಾ ಅವರ ಅಗಲಿಕೆ ಬಗ್ಗೆ ಟ್ವೀಟ್ ಮಾಡುವಾಗ ಯಡವಟ್ಟು ಮಾಡಿಕೊಂಡಿದ್ದಾರೆ.
“ಮತ್ತೊಬ್ಬ ಶೈನಿಂಗ್ ಸ್ಟಾರ್ ಹೋಗಿದ್ದಾರೆ. ಎಂತ ದುರಂತ ಅಂತ್ಯ. ದು:ಖವನ್ನು ಬರಿಸುವ ಶಕ್ತಿ ಆ ಕುಟುಂಬ ಸದಸ್ಯರಿಗೆ ಸಿಗಲಿ” ಬರೆದು ಪೋಸ್ಟ್ಅನ್ನು ಚಿರುಸರ್ಜಾರ ಟ್ವೀಟ್ ಖಾತೆಗೆ ಟ್ಯಾಗ್ ಮಾಡಿದ್ದಾರೆ. ಅದರೆ ಪೋಸ್ಟ್ ಜೊತೆಗೆ ಟಾಲಿವುಡ್ನ ಮೆಗಾ ಸ್ಟಾರ್ ಚಿರಂಜೀವಿ ಅವರ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ.
ಶೋಭಾ ಡೇ ಅವರ ಯಡವಟ್ಟನ್ನು ನೋಡಿದ್ದ ನೆಟ್ಟಿಗರು ಅವರ ದಡ್ಡತನವನ್ನು ಟ್ರೋಲ್ ಮಾಡಿದ್ದು, ಮೆಗಾಸ್ಟಾರ್ ಚಿರಂಜೀವಿ ಮೃತಪಟ್ಟಿಲ್ಲ. ಕನ್ನಡದ ಚಿರಂಜೀವಿ ಸರ್ಜಾ ನಿಧನರಾಗಿದ್ದಾರೆ ಎಂದು ತಿಳಿಸಿದ್ದಾರೆ.
ತಾವು ಮಾಡಿಕೊಂಡಿರುವ ಎಡವಟ್ಟು ಟ್ರೋಲ್ ಆಗುತ್ತಿರುವುದನ್ನು ತಿಳಿದ ಶೋಭಾ ಡೇ ಅವರ ಟ್ವೀಟ್ಅನ್ನು ಡಿಲೀಟ್ ಮಾಡಿದ್ದಾರೆ. ಇದಾದ ಬಳಿಕ ಚಿರ ಸರ್ಜಾಗೆ ಸಂಬಂಧಿಸಿದ ಯಾವುದೇ ಟ್ವೀಟ್ ಅನ್ನು ಶೋಭಾ ಡೇ ಮಾಡಿಲ್ಲ.
ಜನ ಸಾಮಾಜಿಕ ಜಾಲತಾಣದಲ್ಲಿ ದಕ್ಷಿಣ ಕನ್ನಡದ ಸಿನಿ ಪ್ರೇಮಿಗಳು ಶೋಭಾ ಡೇ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
shobha de's tweet shows how much B-Town is aware of South stars. Still many cheap south star fandoms target prabhas and are jealous on his popularity. Daily basis who is more handsome, who is pan-indian, who has more screen presence. https://t.co/HBZw5BJg2m
— Raju Garu Prabhas (@pubzudarlingye) June 7, 2020
ಬಾಲಿವುಡ್ ಸ್ಟಾರ್ ಗಳ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿರುತ್ತದೆ. ಆದರೆ ದಕ್ಷಿಣ ಭಾರತ ಸ್ಟಾರ್ ಗಳ ಬಗ್ಗೆ ನಿಮಗೆ ಎಷ್ಟು ಪರಿಚಯವಿದೆ ಎನ್ನುವುದು ನಿಮ್ಮ ಟ್ವೀಟ್ ನಿಂದಲೇ ತಿಳಿಯುತ್ತದೆ ಎಂದು ರಾಜು ಗುರು ಪ್ರಭಾಸ್ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
This is what happens if you are half minded… Whether politics or entertainment, half knowledge is dangerous than no knowledge. #ShobhaaDe
Before tweeting about such a towering personality of Indian cinema, you should have verified it. https://t.co/n595HwmHDF— బొల్లాప్రగడ నాగ అభిషేక్ (B Naga Abhishek) (@nbollapr) June 7, 2020
ತಮಿಳು ಭಾಷೆಯಲ್ಲಿರುವ ಬಿಲ್ಲಾ ಪ್ರಗಡ ನಾಗ ಅಭಿಷೇಕ್ ಎಂಬುವವರು, ಇದು ನಿಮ್ಮ ಅರ್ಧ ತಿಳುವಳಿಕೆಯನ್ನು ಪ್ರದರ್ಶಿಸಿಸುತ್ತದೆ. ರಾಜಕೀಯ ಮತ್ತು ಮನರಂಜನಾ ಕ್ಷೇತ್ರದ ಬಗ್ಗೆ ಅರ್ಧಂಬರ್ದ ತಿಳಿದುಕೊಂಡು ಪ್ರತಿಕ್ರಿಯಿಸುವುದು ಏನೂ ಗೊತ್ತಿಲ್ಲದಿರುವುದಕ್ಕಿಂತ ಅಪಾಯಕಾರಿ ಎಂದು ಟೀಕಿಸಿದ್ದಾರೆ.
ಕನ್ನಡದ 22 ಚಿತ್ರಗಳಲ್ಲಿ ನಟಿಸಿದ್ದ ಚಿರುಗೆ ಚಿಕ್ಕ ವಯಸ್ಸಿಗೇ ನಿಧನರಾಗಿದ್ದು, ಇಡೀ ಚಿತ್ರರಂಗ ಕಂಬನಿ ಮಿಡಿದಿದೆ.