ಜಾತಿ ಪ್ರೀತಿ ಕೊಲೆ : ಬೂದಗುಂಪಾ ಅಪಘಾತದಲ್ಲಿ ಯುವಕ ಸಾವು ಪ್ರಕರಣಕ್ಕೆ ಟ್ವಿಸ್ಟ್
ಕೊಪ್ಪಳ ತಾಲೂಕು ಬುದಗುಂಪಾ ಗ್ರಾಮದಲ್ಲಿ ಅಪಘಾತದಲ್ಲಿ ಯುವಕ ಸಾವು ಪ್ರಕರಣ ಭಾರೀ ಟ್ವಿಸ್ಟ್ ಪಡೆದುಕೊಂಡಿದ್ದು ಪ್ರೀತಿ ಮಾಡಿದ್ದಕ್ಕೆ ನಡೀತಾ ಯುವಕನ ಕೊಲೆ ಎನ್ನುವ ಶಂಕೆ ವ್ಯಕ್ತವಾಗಿದೆ.
ಜ 3 ರಂದು ಬುದಗುಂಪಾ ಗ್ರಾಮದ ತಾಯಪ್ಪ ಎಂಬಾತ ಅಪಘಾತದಲ್ಲಿ ಗಾಯಗೊಂಡಿದ್ದ. ಗಾಯಾಳುವನ್ನು ಹುಬ್ಬಳ್ಳಿ ಕಿಮ್ಸ್ ಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ತಾಯಪ್ಪ ಜ 25 ರಂದು ಮೃತಪಟ್ಟಿದ್ದ. ಆದರೆ ಇದು ಮೇಲ್ಜಾತಿ ಯುವತಿ ಪ್ರೀತಿ ಮಾಡಿದಕ್ಕೆ ಕೊಲೆ ಮಾಡಲಾಗಿದೆ ಎಂದು ಮೃತ ಯುವಕನ ಕುಟುಂಬದವರ ಆರೋಪ ಮಾಡುತ್ತಿದ್ದಾರೆ.
ಹೌದು.. ಬೂದಗುಂಪಾ ಗ್ರಾಮದ ಸುರೇಶ್ ಸೇರಿ ಇತರ ಮೇಲೆ ಕೊಲೆ ಆರೋಪ ಮಾಡಲಾಗುತ್ತಿದೆ. ಸುರೇಶ ಹೊಳೆಯಾಚೆ ಎಂಬಾತನ ಸಂಬಂಧಿಕಳನ್ನು ತಾಯಪ್ಪ ಲವ್ ಮಾಡುತ್ತಿದ್ದ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಸುರೇಶ್ ಮತ್ತವರ ಕಡೆಯವರು ಸೇರಿ ಕೊಲೆ ಮಾಡಿದ್ದಾರೆಂದು ದೂರಲಾಗುತ್ತಿದೆ.
ದೂರು ಕೊಡಲು ಹೋದ್ರ ಪೊಲೀಸರು ಕ್ಯಾರೆ ಎನ್ನುತ್ತಿಲ್ಲ ಎಂದು ನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ ತಾಯಪ್ಪ ಕುಟುಂಬಸ್ಥರು. ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.