ಜೆಡಿಎಸ್-ಬಿಜೆಪಿ ನಡುವೆ ಹುಲಿ ಇಲಿ ಗಲಾಟೆ : ಹೆಚ್ಡಿಕೆ ವಿರುದ್ಧ ಸಿ.ಟಿ.ಆರ್ ಸಿಡಿಮಿಡಿ

ಜೆಡಿಎಸ್ -ಬಿಜೆಪಿ ನಡುವೆ ಹುಲಿ ಇಲಿ ಗಲಾಟೆ ಶುರುವಾಗಿದೆ.

ಹೌದು… ನಿನ್ನೆ ಹಳೇಬೀಡಿನಲ್ಲಿ ಯಡಿಯೂರಪ್ಪ ರಾಜಾ ಇಲಿ ಎಂದಿದ್ದ ಹೆಚ್ಡಿಕೆ ವಿರುದ್ಧ ಚಿಕ್ಕಮಗಳೂರಿನಲ್ಲಿ ಸಚಿವ ಸಿ.ಟಿ ರವಿ ಸಿಡಿಮಿಡಿಗೊಂಡಿದ್ದಾರೆ.

ಎಚ್ ಡಿ ಕುಮಾರಸ್ವಾಮಿ ಅವರಿಗೆ ರಾಜಕೀಯ ಹತಾಶೆ. ರಾಜಕೀಯ ಹತಾಶೆಯಿಂದ ಹೀಗೆ ಮಾತನಾಡುತ್ತಿದ್ದಾರೆ. ಎಷ್ಟೇ ಪ್ರಯತ್ನಿಸಿದರೂ ಮಗನನ್ನು ಗೆಲ್ಲಿಸಲು ಆಗಲಿಲ್ಲ. ಅಪ್ಪನನ್ನು ಗೆಲ್ಲಿಸಲು ಆಗಲಿಲ್ಲ. ಈ ಎಲ್ಲಾ ಹತಾಶೆ ಹೆಚ್ಡಿಕೆ ಅವರನ್ನ ಕಾಡುತ್ತಿದೆ.

ಯಾರು “ರಾಜಾಹುಲಿ” ಯಾರು “ರಾಜಾಇಲಿ” ಅನ್ನೋದು ಗೊತ್ತಿದೆ. ಯಾರು ಹುಲಿ ಯಾರು ಅನ್ನೋದನ್ನ ಜನ ತೀರ್ಮಾನಿಸಿದ್ದಾರೆ. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿಗೆ 117 ಸ್ಥಾನ ಸಿಕ್ಕಿದೆ. ಇದರಿಂದ ಯಾರನ್ನ ಇಲಿ ಯಾರನ್ನ ಹುಲಿ ಮಾಡಿದ್ದಾರೆ ಗೊತ್ತಾಗುತ್ತದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights