ತಮಿಳುನಾಡು ವಿರುದ್ದ ಮೈಸೂರು ಪಾಕ್ ಪರವಾಗಿ ವಾಟಾಳ್ ಯುದ್ಧ….
ಸದಾ ವಿನೂತನ ಪ್ರತಿಭಟನೆಗೆ ಸಾಕ್ಷಿಯಾಗಿರುವ ವಾಟಾಳ್ ನಾಗರಾಜ್ ಇಂದು ಮತ್ತೊಂದು ವಿನೂತನ ಪ್ರತಿಭಟನೆಗೆ ಸಾಕ್ಷಿಯಾಗಿದ್ದಾರೆ.
ಹೌದು… ತಮಿಳುನಾಡಿನ ಮೈಸೂರು ಪಾಕ್ ಕಿರಿಕ್ಗೆ ವಾಟಾಳ್ ಕಿಡಿಕಾರಿದ್ದಾರೆ. ಸಾರ್ವಜನಿಕರಿಗೆ ಮೈಸೂರು ಪಾಕ್ ಹಂಚಿದ ವಾಟಾಳ್ ನಾಗರಾಜ್ ಕನ್ನಡ ಪರ ಹೋರಾಟಗಾರ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಮೈಸೂರಿನ ರೈಲ್ವೆ ನಿಲ್ದಾಣದ ಮುಂಭಾಗ ಪ್ರತಿಭಟನೆ ಮಾಡಿದರು. ಮೈಸೂರು ಪಾಕ್ ಹಿಡಿದು ಸಾರ್ವಜನಿಕರಿಗೆ ನೀಡಿ ಮೈಸೂರು ಪಾಕ್ ನಮ್ಮದು ಎಂದು ಘೋಷಣೆ ಕೂಗಿದರು. ವಾಟಾಳ್ ನಾಗರಾಜ್ಗೆ ಹಲವು ಕನ್ನಡ ಪರ ಹೋರಾಟಗಾರರ ಸಾಥ್ ನೀಡಿದರು.
ಈ ವೇಳೆ ಮಾತನಾಡಿದ ವಾಟಳ್, ತಮಿಳುನಾಡಿನವರು ಮೈಸೂರು ಪಾಕ್ ನಮ್ಮದ್ದು ಎಂದು ಕೈ ಹಾಕಿದ್ದಾರೆ. ಕಾವೇರಿಗೆ ಕೈ ಹಾಕಿ ಹಾಕಿ ಸಾಕಾಗಿದೆ. ಮೇಕೆದಾಟುಗೆ ಕೈ ಹಾಕಿ ಸಾಕಾಗಿದೆ. ಮೈಸೂರು ಪಾಕ್ 100ಕ್ಕೆ ನೂರರಷ್ಟು ಮೈಸೂರಿನದ್ದು.
ಮೈಸೂರು ಪಾಕ್ ನಮ್ಮದೆ ನಮ್ಮದೆ ಸಿಹಿ. ಮೈಸೂರು ಪಾಕ್ ಮಾತ್ರವಲ್ಲ, ವೀಳ್ಯದೆಲೆ, ಬದನೆಕಾಯಿ ಕೂಡ. ಮೈಸೂರು ಸ್ಯಾಂಡಲ್ ಇದೆಲ್ಲವೂ ವಿಶ್ವ ಖ್ಯಾತಿ ಗಳಿಸಿದೆ. ತಮಿಳುನಾಡಿನವ್ರು ಮತ್ತೋಂದು ಸಾರಿ ಹೀಗೆ ಹೇಳಿದ್ರೆ.
ತಮಿಳುನಾಡಿಗೆ ಮತ್ತೊಂದು ಸಾರಿ ಮೈಸೂರು ಪಾಕ್ ಕಳ್ಸೋದಿಲ್ಲ. ನೀವು ಮೈಸೂರು ಪಾಕ್ ಮರೆತು ಬಿಡಬೇಕು. ಮೈಸೂರು ಪಾಕ್ ತಿನ್ನಬೇಕೆಂಬ ಇಚ್ಛೆ ಇದ್ದರೆ. ಇದು ಮೈಸೂರಿನದ್ದು ಎಂದುಕೊಂಡು ರುಚಿ ನೋಡಬಹುದು ಎಂಡು ಹೇಳಿದ್ದಾರೆ.
ಮೈಸೂರು ದಸರಾ ವೇಳೆ ಮೈಸೂರು ಪಾಕ್ ಬಗ್ಗೆ ಹೇಳಿರೋದು ಸರಿಯಲ್ಲ. ಇದಕ್ಕಾಗಿ ಮೈಸೂರು ಪಾಕ್ ಹಂಚಿ ವಿರೋಧ ಮಾಡ್ತಾ ಇದ್ದೀವಿ. ತಮಿಳುನಾಡಿನವ್ರುದ್ದು ಪದೇ ಪದೇ ಇದೇ ಕೆಲಸ. ಹೊಲಸು ರಾಜಕೀಯ ಮಾಡಿಕೊಂಡ ಬರುತ್ತಿದೆ.
ಮೊದಲಿನಿಂದಲು ಇದೇ ರೀತಿಯ ಕೆಲಸ. ಕಾವೇರಿ ಆಯ್ತು, ಮೇಕೆದಾಟು ಅವರದ್ದಲ್ಲ ಅದಕ್ಕು ಕೈ ಹಾಕಿದ್ರು. ಮೈಸೂರು ಪಾಕ್ಗಾಗಿ ಯುದ್ದವೇ ಆರಂಭಿಸುತ್ತೇವೆ ಎಂದು ಮೈಸೂರಿನಲ್ಲಿ ತಮಿಳುನಾಡಿಗೆ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.