ದೇವರಿಗೆ ಲೇಟರ್ ಬರೆದ ಭಕ್ತ : ಹುಂಡಿಯಲ್ಲಿ ಹಣದೊಂದಿಗೆ ಸಿಕ್ಕ ಪತ್ರ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಐತಿಹಾಸಿಕ ಪ್ರಸಿದ್ದ ಆಂಜನಾದ್ರಿ ಬೆಟ್ಟದ ಹುಂಡಿಯಲ್ಲಿ ಪತ್ರವೊಂದು ಪತ್ತೆಯಾಗಿದೆ. ಪತ್ರವನ್ನು ಓದಿದ ಅಧಿಕಾರಿಗಳು ಗಾಬರಿಯಾಗಿದ್ದಾರೆ.

ಹೌದು… ಅಷ್ಟಕ್ಕೂ ಆ ಪತ್ರದಲ್ಲಿ ಏನಿತ್ತು ಗೊತ್ತಾ..? ಹುಂಡಿ ಹಣ ಕೌಟಿಂಗ್ ವೇಳೆ ಭಕ್ತನ ವಿಚಿತ್ರ ಪತ್ರವನ್ನು ಮಲ್ಲಿಕಾರ್ಜುನ ತೋರಣಗಲ್ ಎಂಬ ಭಕ್ತ ಬರೆದು ಹುಂಡಿಗೆ ಹಾಕಿದ್ದಾನೆ.ಮಲ್ಲಿಕಾರ್ಜುನ ಕೊಪ್ಪಳ ತೋರಣಗಲ್ ಭಕ್ತ. ಈತ ಪತ್ರದಲ್ಲಿ ಬರೆದಿದ್ದು ಇಂಥಹ ವಿಚಾರಗಳು ” ನನ್ನ ಮನೆಯ ಕಟ್ಟಡ ಪೂರ್ಣಗೊಳ್ಳಬೇಕು. ನಾನು ಕೋರ್ಟ್ ಕೇಸ್ನಲ್ಲಿ ಮುಕ್ತನಾಗಬೇಕು. ನನಗೆ ಮಾಟ ಮಾಡಲಾಗಿದೆ, ಅದ್ರಿಂದ ದೂರವಾಗಬೇಕು.

ಶಂಕ್ರಪ್ಪ ಎನ್ನುವವನು ಸದ್ಯ 20 ಲಕ್ಷ ರೂ ಸಾಲ ಕೊಡುವಂತೆ ಮಾಡು” ಎಂದು ಉಲ್ಲೇಖಿಸಿದ್ದಾರೆ. ಹೀಗೆ ಬೇಡಿಕೆಗಳ ಸರ ಮಾಲೆ ಉಲ್ಲೇಖಿಸಿ ದೇವರಿಗೆ ಲೇಟರ್ ಬರೆದಿದ್ದಾರೆ. ಇದನ್ನು ಓದಿದ ಅಧಿಕಾರಿಗಳು ಆಶ್ಚರ್ಯಗೊಂಡಿದ್ದಾರೆ.

 

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights