ಧ್ವಜಾರೋಹಣ ಸಂದರ್ಭದಲ್ಲಿ ತುಂಡಾಗಿ ಬಿದ್ದ ಧ್ವಜದ ಹಗ್ಗ : ಗಣ್ಯರಿಗೆ ಮುಜುಗರ

ವಿಶ್ವವಿಖ್ಯಾತ ಮೈಸೂರು ದಸರಾ ಪ್ರಯುಕ್ತ ಮೈಸೂರಿನ ಚಾಮುಂಡಿವಿಹಾರ ಕ್ರೀಡಾಂಗಣ ಉದ್ಘಾಟನೆಗೆ ಹಾರಾಡಬೇಕಿದ್ದ ಧ್ವಜ ಹಾರಾಡದೆ ಗಣ್ಯರಿಗೆ ಮುಜುಗರ ತಂದ ಘಟನೆ ನಡೆದಿದೆ.

ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟನೆಗೆ ಉಸ್ತುವಾರಿ ಸಚಿವ ವಿ.ಸೋಮಣ್ಣ ಆಗಮಿಸಿದ್ದರು. ಧ್ವಜಾರೋಹಣ ಸಂದರ್ಭದಲ್ಲಿ ಹಗ್ಗ ತುಂಡಾಗಿ ವಿ.ಸೋಮಣ್ಣ ಮೇಲೆಯೇ ತುಂಡಾಗಿ ಆಗಿ ಬಿದ್ದಿದ್ದು ಮುಜುಗರಕ್ಕೀಡುಮಾಡಿತು. ಈ ವೇಳೆ ಧ್ಜಜರೋಹಣ ಸಾಧ್ಯವಾಗದೆ ಕ್ರೀಡಾಪಟುಗಳ ಪರಿಚಯಕ್ಕೆ ವಿ.ಸೋಮಣ್ಣ ತೆರಳಿದರು.

ಜಿಲ್ಲಾಮಟ್ಟದ ಒಂದು ದಿನದ ದಸರಾ ಕ್ರೀಡಾಕೂಟ ಆಯೋಜನೆ ವೇಳೆ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳ ಎಡವಟ್ಟಿನಿಂದಾಗಿ ಉಸ್ತುವಾರಿ ಸಚಿವ ಹಾಗೂ ಹಿರಿಯ ಅಧಿಕಾರಿಗಳು. ಎಲ್ಲರ ಮುಂದೆ ಮುಜುಗರಕ್ಕಿಡಾದರು.

ತೆಳು ಹಗ್ಗ ಬಳಸಿದ ಪರಿಣಾಮ ಹಗ್ಗ ಕಿತ್ತು ಬಿದ್ದಿದೆ ಎನ್ನಲಾಗುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights