ನಾಯಿ ಬೊಗಳದಂತೆ, ಕುರಿ ಮರಿಗಳು ಒದರದಂತೆ ಮಾಡಿ ಹೈಟೆಕ್ ಕಳ್ಳತನ ಮಾಡಿದ ಖದೀಮರು!
ಕುರಿ ಮತ್ತು ನಾಯಿಗಳಿಗೆ ಮತ್ತು ಬರುವ ಸ್ಪೇ ಬಳಸಿ 15 ಕುರಿಗಳನ್ನು ಹೈಟೆಕ್ ರೀತಿಯಲ್ಲಿ ಕಳವು ಮಾಡಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗಣಿಹಾರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರೈತ ಸುಭಾಷ ವಾಲಿಕಾರ ಎಂಬುವರಿಗೆ ಸೇರಿದ ತೋಟದ ಮನೆಯ ಹಶು ಕುರಿ ದೊಡ್ಡಿಯಲ್ಲಿ ಕುರಿಗಳನ್ನು ಸಾಕಣೆ ಮಾಡಲಾಗಿತ್ತು. ಅಲ್ಲದೆ, ತೋಳ ಸೇರಿದಂತೆ ಕಳ್ಳರನ್ನು ಬೆದರಿಸಲು ನಾಯಿಗಳನ್ನು ಸಾಕಲಾಗಿತ್ತು. ಆದರೆ, ಈ ಕುರಿ ದೊಡ್ಡಿಯಲ್ಲಿದ್ದ 15 ಕುರಿಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಕುರಿಗಳಿಗೆ ಹಾಗೂ ನಾಯಿಗಳಿಗೆ ಮತ್ತು ಬರುವ ಸ್ಪ್ರೇ ಬಳಸಿರುವ ಶಂಕೆ ವ್ಯಕ್ತವಾಗಿದೆ. ಕುರಿಗಳು ಕೂಗಬಾರದೆಂದು ಕಳ್ಳರು ಸ್ಪ್ರೇ ಬಳಸಿದ್ದಾರೆಂದು ರೈತ ಆರೋಪಿಸಿದ್ದಾನೆ.
ನಾಯಿಗಳು ಸಹ ಬೊಗಳಬಾರದು ಎಂದು ಅವುಗಳಿಗೂ ಮತ್ತಿನ ಸ್ಪ್ರೇ ಹೊಡೆದಿರುವ ಶಂಕೆ ವ್ಯಕ್ತವಾಗಿದೆ. ಇದರಿಂದಾಗಿ ರೈತನಿಗೆ ಸುಮಾರು ರೂ. 1.50 ಲಕ್ಷ ರೂಪಾಯಿ ನಷ್ಟವಾಗಿದ್ದು, ರೈತರ ಸುಭಾಷ ವಾಲಿಕಾರ ಗೋಳಾಡುವಂತಾಗಿದೆ. ವಿಜಯಪುರ ಜಿಲ್ಲೆಯ ಸಿಂದಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.