‘ನಾವು ಪಾಕಿಸ್ತಾನದ ಹುಲಿಗಳು, ರಾಜ್ಯದ ಐದು ಜಿಲ್ಲೆಯಲ್ಲಿ ಇದ್ದೇವೆ’ : ನೋಟಿನಲ್ಲಿ ಬಾಳೆಹೊನ್ನೂರು ಟಾರ್ಗೆಟ್?
ಹಳೆಯ 50 ರೂ ನೋಟಿನ ಮೇಲೆ ಆತಂಕಕಾರಿ ವಿಷಯ ಬರೆದಿರುವುದು ಸದ್ಯ ಆತಂಕ ಸೃಷ್ಟಿಮಾಡಿದೆ.
ಹೌದು.. ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಲ್ಲಿ ಸಿಕ್ಕ 50 ರೂಪಾಯಿ ನೋಟಿನ ಮೇಲೆ ದುಷ್ಕರ್ಮಿಗಳು ಬರೆದ ವಿಷಯ ಆತಂಕಕ್ಕೆ ಗುರಿ ಮಾಡಿದೆ. 50 ರೂ ನೋಟಿನ ಮೇಲೆ ಬರೆದು ವಿಷಯ ಹೀಗಿದೆ-
‘ಓರ್ವ ಭಾರತೀಯನನ್ನೂ ಬಿಡಲ್ಲ. ನಾವು ಪಾಕಿಸ್ತಾನದ ಹುಲಿಗಳು, 6 ಜನ ಬಂದಿದ್ದೇವೆ. ರಾಜ್ಯದ ಐದು ಜಿಲ್ಲೆಯಲ್ಲಿ ಇದ್ದೇವೆ. ಬಾಳೆಹೊನ್ನೂರಿನಲ್ಲಿ ಇಬ್ಬರು ಇದ್ದೇವೆ. ನಮಗೆ ಕನ್ನಡದವರೇ ಸಹಾಯ ಮಾಡ್ತಿದ್ದಾರೆ.’ ಎಂದು ಬರೆಯಲಾಗಿದೆ.
ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕು ದತ್ತಮಾಲೆ ಸಂದರ್ಭದಲ್ಲಿ ದುಷ್ಕರ್ಮಿಗಳು ಇಂತಹದೊಂದು ಕಿಚ್ಚು ಹತ್ತಿಸಿರೋದು ಆತಂಕ ಸೃಷ್ಟಿ ಮಾಡಿದೆ.