ಪಕ್ಷ ವಿರೊಧಿ ಚಟುವಟಿಕೆ ಹಿನ್ನಲೆ : ರಮೇಶ್ ಕುಮಾರ್ ವಿರುದ್ದ ಕೆಎಚ್ ಮುನಿಯಪ್ಪ ವಾಗ್ದಾಳಿ….
ಲೋಕಸಭೆ ಚುನಾವಣೆಯಲ್ಲಿ ಪಕ್ಷ ವಿರೊಧಿ ಚಟುವಟಿಕೆ ಹಿನ್ನಲೆಯಲ್ಲಿ ರಮೇಶ್ ಕುಮಾರ್ ವಿರುದ್ದ ಕೆಎಚ್ ಮುನಿಯಪ್ಪ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ. ಬಿಜೆಪಿ ಪರ ಕೆಲಸ ಮಾಡಿದವರು ಮಾನ ಮರ್ಯಾದೆ ಇದ್ದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಹೆಸರೇಳಬಾರದು. ಬಿಜೆಪಿ ಜೊತೆಗೆ ಕೆಲಸ ಮಾಡಿ ಮತ್ತೊಮ್ಮೆ ಕಾಂಗ್ರೆಸ್ ಕಚೇರಿಗೆ ಬರಬಾರದು.
ಈಗಾಗಲೇ ರಮೇಶ್ ಕುಮಾರ್, ಎಸ್ ಎನ್ ನಾರಾಯಣಸ್ವಾಮಿ, ವಿ ಮುನಿಯಪ್ಪ ಪಕ್ಷ ವಿರೋದಿ ಚಟುವಟಿಕೆ ಮಾಡಿದ್ದಾರೆಂದು ಹೇಳಿದ್ದೇನೆ. ಒಂದು ತಿಂಗಳ ಒಳಗಾಗಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದವ್ರ ವಿರುದ್ದ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೋಲಾರದಲ್ಲಿ ಮಾಜಿ ಸಂಸದ ಕೆಎಚ್ ಮುನಿಯಪ್ಪ ಹೇಳಿದ್ದಾರೆ.