ಪವರ್ ಫುಲ್ ಹೊಳೆ ಆಂಜನೇಯನ ದರ್ಶನ ಪಡೆದ ನಟಿ ಪ್ರೇಮ….
ಮಂಡ್ಯ ಜಿಲ್ಲೆಯ ಮದ್ದೂರಿನ ಪ್ರಸಿದ್ಧ ದೇಗುಲ ಹೊಳೆ ಆಂಜನೇಯ ದೇವಾಲಯಕ್ಕೆ ಕನ್ನಡದ ನಟಿ ಪ್ರೇಮ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಪ್ರತೀ ಶನಿವಾರ ಹೊಳೆ ಆಂಜನೇಯ ದೇವಸ್ಥಾನದಲ್ಲಿ ನಡೆದ ವಿಶೇಷ ಪೂಜೆ ಕಾರ್ಯಕ್ರಮ ನಡೆಯುತ್ತದೆ. ಆದರೆ ಈ ಬಾರಿಯ ಪೂಜೆಗೆ ನಟಿ ಪ್ರೇಮ ಆಗಮಿಸಿದ್ದು ವಿಶೇಷವಾಗಿತ್ತು. ಸ್ನೇಹಿತರೊಂದಿಗೆ ದೇಗುಲಕ್ಕೆ ಭೇಟಿ ನೀಡಿದ ಪ್ರೇಮ ಪೂಜೆ ಸಲ್ಲಿಸಿದರು.
ಒಂದು ಕಾಲು ರೂಪಾಯಿ ಹರಕೆ ಕಟ್ಪಿಕೊಂಡ್ರೆ ಇಷ್ಟಾರ್ಥ ನೆರವೇರಲಿದೆ ಅನ್ನೋ ಪ್ರತೀತಿಯಿಂದ ಹೊಳೆ ಆಂಜನೇಯ ಸ್ವಾಮಿಗೆ ಒಂದು ಕಾಲು ರೂಪಾಯಿ ಹರಕೆ ಕಟ್ಟಿಕೊಂಡರು. ಸಿನಿಮಾ, ರಾಜಕೀಯ ಕ್ಷೇತ್ರದ ಹಲವರು ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿ ಹೋಗುವ ಪವರ್ ಪುಲ್ ದೇವಸ್ಥಾನ ಇದಾಗಿರುವುದರಿಂದ ಇತ್ತೀಚೆಗೆಷ್ಟೇ ಮೈಸೂರು ರಾಜವಂಶಸ್ಥ ಯಧುವೀರ ಒಡೆಯರ್ ಭೇಟಿ ನೀಡಿ ಹರಕೆ ಕಟ್ಪಿಕೊಂಡಿದ್ದಾರೆ.