ಪ್ರಧಾನಮಂತ್ರಿ ಪರಿಹಾರ ನಿಧಿ ಇರುವಾಗ ಪಿಎಂ ಕೇರ್ಸ್ ನಿಧಿ ಏಕೆ?: ಟ್ವೀಟ್ ಮೂಲಕ ರಾಮಚಂದ್ರ ಗುಹ ಪ್ರಶ್ನೆ
ಕೊರೊನ ಸಾಂಕ್ರಾಮಿಕ ವ್ಯಾಪಕವಾಗಿ ದೇಶದಲ್ಲಿ ಹರಡುತ್ತಿರುವ ಈ ಸಮಯದಲ್ಲಿ “ಪಿಎಂ-ಕೇರ್ಸ್” (ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಯಲ್ಲಿ ಪರಿಹಾರ) ನಿಧಿಗೆ ದೇಣಿಗೆ ನೀಡಲು ಕೇಂದ್ರ ಸರ್ಕಾರ ಜನರನ್ನು ಮತ್ತು ಕಾರ್ಪೋರೆಟ್ ಸಂಸ್ಥೆಗಳನ್ನು ಕೋರಿತ್ತು.
ರಾಷ್ಟ್ರೀಯ ವಿಪತ್ತುಗಳ ಸಮಯದಲ್ಲಿ ಪರಿಹಾರ ನೀಡಲು ಈ ಸಾರ್ವಜನಿಕ ಧರ್ಮ ಸಂಸ್ಥೆಯನ್ನು ಹುಟ್ಟಿಹಾಕಿರುವುದಾಗಿ ತಿಳಿಸಿದ್ದು ಇದಕ್ಕೆ ಪ್ರಧಾನಿ ಅಧ್ಯಕ್ಷರಾಗಿದ್ದು, ರಕ್ಷಣಾ ಸಚಿವ, ಗೃಹ ಸಚಿವ ಮತ್ತು ವಿತ್ತ ಸಚಿವರು ಸದಸ್ಯರು. ಈ ನಿಧಿಗೆ ಕೊಡುವ ದೇಣಿಗೆಯನ್ನು ಕಾರ್ಪೋರೆಟ್ ಸಾಮಾಜಿಕ ಜವಾಬ್ದಾರಿ ಖರ್ಚಿನ ಭಾಗವಾಗಿ ಪರಿಗಣಿಸಲಾಗುತ್ತದೆ ಎಂದು ಕೂಡ ಘೋಷಿಸಲಾಗಿತ್ತು. ಇದರ ಅಡಿಯಲ್ಲಿ ನೀಡುವ ದೇಣಿಗೆಗೆ 80ಜಿ ಅಡಿಯಲ್ಲಿ ತೆರಿಗೆ ವಿನಾಯಿತಿ ಕೂಡ ಸಿಗುವುದಾಗಿ ತಿಳಿಸಲಾಗಿತ್ತು.
“…any contribution made to the PM CARES Fund shall qualify as CSR expenditure…” https://t.co/ZpQRcpXg3I pic.twitter.com/t7oZ6jXXU0
— Nirmala Sitharaman (@nsitharaman) March 29, 2020
ಈ ಅಕೌಂಟ್ ಹೆಸರನ್ನು ಹೋಲುವ ನಕಲಿ ಅಕೌಂಟ್ ಕೂಡ ಕೆಲವರು ಸೃಷ್ಟಿಸಿದ್ದು ಅದರ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಕೂಡ ನಂತರ ಸರ್ಕಾರ ಎಚ್ಚರಿಸಿತ್ತು.
Beware of Fake UPI ID being circulating on the pretext of PM CARES Fund.#PIBFactcheck: The correct UPI ID of #PMCaresFunds is pmcares@sbi#PMCARES #IndiaFightsCorona pic.twitter.com/eHw83asBQ9
— PIB Fact Check (@PIBFactCheck) March 29, 2020
ಪ್ರಧಾನ ಮಂತ್ರಿ ಪರಿಹಾರ ನಿಧಿ ಈಗಾಗಲೇ ಇರುವಾಗ ಪಿ-ಎಂ ಕೇರ್ಸ್ ಎಂಬ ಹೊಸ ನಿಧಿ ಸೃಷ್ಟಿಸುವ ಅಗತ್ಯವೇನಿತ್ತು ಎಂದು ಚಿಂತಕ-ಇತಿಹಾಸಕಾರ ರಾಮಚಂದ್ರ ಗುಹಾ ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದಾರೆ. “ಇಂತಹ ರಾಷ್ಟ್ರೀಯ ದುರಂತದ ಸಮಯದಲ್ಲಿ ವ್ಯಕ್ತಿಯನ್ನು ಆರಾಧಿಸುವ ಹೆಸರು ಬೇಕಿತ್ತೆ?” ಎಂದು ಕೂಡ ಅವರು ಪ್ರಶ್ನಿಸಿದ್ದಾರೆ.
This is a very important thread. Why a new fund when a Prime Minister’s National Relief Fund already exists? And why the self-aggrandizing name, PM-CARES? Must a colossal national tragedy also be (mis)used to enhance the cult of personality? https://t.co/97NspbaVwh
— Ramachandra Guha (@Ram_Guha) March 29, 2020
ಇಂತಹ ರಾಷ್ಟ್ರೀಯ ವಿಪತ್ತಿನ ಸಮಯದಲ್ಲಿ, ಅಧಿಕಾರದಲ್ಲಿರುವ ಪಕ್ಷದ ಇಮೇಜ್ ಹೆಚ್ಚಿಸಿಕೊಳ್ಳಲು ಹಲವು ನಕಲಿ ಸಂದೇಶಗಳು ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಚೈನಾಗಿಂತ ಹೆಚ್ಚು ಬೆಡ್ ಗಳನ್ನು ಮೋದಿ ಗುಜರಾತಿನಲ್ಲಿ ನಿರ್ಮಿಸಿದ್ದಾರೆ ಎಂಬಂತಹ ನಕಲಿ ಮೆಸೇಜ್ ಗಳು, ಕೊರೊನ ಸಮಯದಲ್ಲಿ, ಸಾಂಕ್ರಾಮಿಕ ತಡೆಯುವಲ್ಲಿ ಹೆಚ್ಚು ಕಾರ್ಯನಿರತವಾಗಿರಬೇಕಾದ ಸನಮಯದಲ್ಲಿ ಸಾಮಾನ್ಯರಿಗೆ ಮತ್ತು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಪಿಎಂ ಕೇರ್ಸ್ ಪರಿಹಾರ ನಿಧಿಯ ಬಗ್ಗೆ ಸೋಮವಾರ ಸಂಸದ ಶಶಿ ತರೂರ್ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಧಾನ ಮಂತ್ರಿ ಪರಿಹಾರ ನಿಧಿಯನ್ನೇ ಹೆಸರು ಬದಲಿಸಿ ಪಿಎಂ ಕೇರ್ಸ್ ಮಾಡಬಹುದಿತ್ತು. ನಿಯಮಗಳು ಮತ್ತು ಖರ್ಚಿನ ಬಗ್ಗೆ ಪಾರದರ್ಶಕತೆ ಇಲ್ಲ ಹೊಸ ನಿಧಿಯನ್ನು ಸ್ಥಾಪಿಸಿದ್ದು ಏಕೆ? ಈ ಅನುಮಾನಾಸ್ಪದ ನಡೆಯ ಬಗ್ಗೆ ಪ್ರಧಾನಮಂತ್ರಿ ಕಾರ್ಯಾಲಯ ದೇಶಕ್ಕೆ ವಿವರಣೆ ನೀಡಬೇಕು ಎಂದಿದ್ದಾರೆ.
This is important. Why not simply rename PMNRF as PM-CARES, given the PM's penchant for catchy acronyms, instead of creating a separate Public Charitable Trust whose rules & expenditure are totally opaque? @PMOIndia you owe the country an explanation for this highly unusual step. https://t.co/qRhX0T1PmB
— Shashi Tharoor (@ShashiTharoor) March 30, 2020
ಹಲವು ರಾಜ್ಯ ಸರ್ಕಾರಗಳು ಕೂಡ ದೇಣಿಗೆ ಸಂಗ್ರಹಿಸಲು ಪರಿಹಾರ ನಿಧಿಯ ಅಕೌಂಟ್ ವಿವರಗಳನ್ನು ಘೋಷಿಸಿವೆ.
https://twitter.com/CMofKarnataka/status/1244229798685097985