ಬಿಜೆಪಿ ವಿರುದ್ದ ಕೆ.ಆರ್.ಪೇಟೆಯಲ್ಲಿ ಕುರುಬಾಸ್ತ್ರ‌ಪ್ರಯೋಗಕ್ಕೆ ಸಿದ್ರಾಮಯ್ಯ ಮಾಸ್ಟರ್ ಪ್ಲ್ಯಾನ್……

ಮಂಡ್ಯ ಕೆ.ಆರ್.ಪೇಟೆ ಉಪ ಚುನಾವಣಾ ಅಖಾಡ ರಂಗೇರಿದೆ. ಕೆ.ಆರ್.ಪೇಟೆಯಲ್ಲಿ ಪ್ರಚಾರದಲ್ಲಿಂದು ಅಬ್ಬರಿಸಲಿರುವ ಮಾಜಿ. ಸಿ.ಎಂ‌.ಸಿದ್ರಾಮಯ್ಯ,. ಬಿಜೆಪಿ ವಿರುದ್ದ ಕೆ.ಆರ್.ಪೇಟೆಯಲ್ಲಿ ಕುರುಬಾಸ್ತ್ರ‌ಪ್ರಯೋಗಕ್ಕೆ ಸಿದ್ರಾಮಯ್ಯ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.

ಕೆ.ಆರ್.ಪೇಟೆಯಲ್ಲಿ ಕುರುಬರದ್ದು ಎರಡನೇ ಅತಿ ದೊಡ್ಡ ಸಮುದಾಯ. ಇತ್ತಿಚೇಗಷ್ಟೆ ಕನಕದಾಸ ವಿಚಾರದಲ್ಲಿ ವಿವಾದಕ್ಕೆ ಸಿಲುಕಿರೋ ಬಿಜೆಪಿಯ ಎಡವಟ್ಟು ಮುಂದಿಟ್ಟುಕೊಂಡು ಬಿಜೆಪಿ ವಿರುದ್ದ ಮುಗಿಬೀಳಲು ಸಿದ್ರಾಮಯ್ಯ ಸಿದ್ದತೆ ನಡೆಸಿದ್ದಾರೆ. ಕುರುಬ ಸಮುದಾಯವನ್ನು ಬಿಜೆಪಿ ವಿರುದ್ದ ಅಸ್ತ್ರ ವನ್ನಾಗಿ ಬಳಸಲು ಸಿದ್ರಾಮಯ್ಯ ಪ್ಲ್ಯಾನ್ ಮಾಡಿದ್ದಾರೆ. ಹೀಗಾಗಿ ಕುರುಬ ಸಮುದಾಯದ ನಾಯಕರು ಮಾಧುಸ್ವಾಮಿ ಪ್ರಚಾರಕ್ಕೆ ಬಂದರೆ ಪ್ರತಿಭಟನೆ ಎಚ್ಚರಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ಈ ಸ್ಟ್ಯಾಟರ್ಜಿಗೆ ಬಿಜೆಪಿ ತಲೆಕೆಡಿಸಿಕೊಂಡಿದೆ. ಕುರುಬ ಸಮೂದಾಯದ ಮತಗಳ ಡ್ಯಾಮೇಜ್ ಕಂಟ್ರೋಲ್‌ಗೆ ಬಿಜೆಪಿ ಮುಂದಾಗಿದೆ.

ಜೊತೆಗೆ ಇಂದು ಮೂರು ಪಕ್ಷದ ಅಭ್ಯರ್ಥಿ ಪರವಾಗಿ ರಾಜ್ಯ ನಾಯಕರು ಕಣಕ್ಕಿಳಿಯಲಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರವಾಗಿ ಮತಯಾಚಿಸಲು ಮಾಜಿ ಸಿ.ಎಂ. ಸಿದ್ದರಾಮಯ್ಯ ಅಖಾಡಕ್ಕಿಳಿಯಲಿದ್ದಾರೆ. ಇಂದು ಕೆ.ಆರ್.ಪೇಟೆ ತಾಲೂಕು ವ್ಯಾಪ್ತಿಯಲ್ಲಿ ಬರುವ ಹಿರಿಕಳಲೇ,ಕಿಕ್ಕೇರಿ, ಮಂದಗೆರೆ,ಬೀರುವಳ್ಳಿ, ,ಅಕ್ಕಿ ಹೆಬ್ಬಾಳು, ಆಲಂಬಾಡಿ ಕಾವಲ್ ಮತ್ತು ಗಂಜಿಗೆರೆಯಲ್ಲಿ ಕೈಪರ ಅದ್ದೂರಿ ಪ್ರಚಾರ ನಡೆಯಲಿದೆ.

ಇತ್ತ ಬಿಜೆಪಿ ಪಕ್ಷದ ಅಭ್ಯರ್ಥಿ ನಾರಾಯಣಗೌಡ ಪರವಾಗಿ ಸಿ.ಎಂ. ಪುತ್ರ ಅಖಾಡಕ್ಕೆ  ಇಳಿಯಲಿದ್ದಾರೆ. ಇಂದಿನಿಂದ ತಾಲೂಕು ವ್ಯಾಪ್ತಿಯಲ್ಲಿ ವಿಜಯೇಂದ್ರ ಪ್ರಚಾರ ಮಾಡಲಿದ್ದಾರೆ. ಇನ್ನೂ ಜೆಡಿಎಸ್ ಪಕ್ಷದ ಅಭ್ಯರ್ಥಿ ಪರವಾಗಿ ರೇವಣ್ಣ ಸೇರಿ ಜಿಲ್ಲೆಯ ಶಾಸಕರು ತಾಲೂಕಿನಲ್ಲಿ ಕ್ಯಾಂಪೇನ್ ಮಾಡಲಿದ್ದಾರೆ.ರಾಜ್ಯ ನಾಯಕರ ಪ್ರಚಾರದ ಅಬ್ಬರದಿಂದ ಕೆ.ಆರ್.ಪೇಟೆಯ ಉಪಕದನ ಕಾವೇರಿದೆ.

 

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights