ಬಿಬಿಎಂಪಿ ಮೇಯರ್ ಚುನಾವಣೆ ಒಂದುವರೆ ತಿಂಗಳು ಮುಂದೂಡಿದ ಸಿಎಂ…!

ಬಿಬಿಎಂಪಿ ಮೇಯರ್ ಮತ್ತು ಉಪಮೇಯರ್ ಚುನಾವಣೆಯನ್ನು ಇನ್ನೂ ಒಂದೂವರೆ ತಿಂಗಳು ನಡೆಸಲಾಗುವುದಿಲ್ಲ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಇಂದು ಘೋಷಿಸಿದ್ದಾರೆ. ಈ ಬೆನ್ನೆಲ್ಲೆ ಬಿಬಿಎಂಪಿ ಮೇಯರ್ ಆಯ್ಕೆ ವಿಚಾರವಾಗಿ ಹುಟ್ಟಿಕೊಂಡ ನಳಿನ್ ಕುಮಾರ್ ಕಟೀಲು ಬಣ ಚುನಾವಣೆ ನಡೆಯಲೇಬೇಕು ಎಂದಿದ್ದಾರೆ.

ಮೇಯರ್ ಅಧಿಕಾರದ ಅವಧಿ ಒಂದು ವರ್ಷ ಪೂರ್ಣಗೊಳ್ಳುತ್ತಿದ್ದಂತೆ ಪ್ರಾದೇಶಿಕ ಆಯುಕ್ತರು ಕೆಎಂಸಿ ಆಕ್ಟ್ ಪ್ರಕಾರ ಚುನಾವಣೆ ಮಾಡಲೇಬೇಕು. ಇಲ್ಲವಾದರೆ ಕಾನೂನು ಉಲ್ಲಂಘನೆ ಮಾಡಿದಂತಾಗುತ್ತದೆ. ಸಿಎಂ ಯಡಿಯೂರಪ್ಪ ಮೇಯರ್ ಚುನಾವಣೆ ಮುಂದೂಡಿಕೆ ವಿಚಾರವನ್ನು ಮಾಧ್ಯಮಗಳ ಮುಂದೆ ಪ್ರಸ್ತಾಪಿಸಿ ಇದರ ಬಗ್ಗೆ ಅಧಿಕೃತವಾಗಿ ಪ್ರಾದೇಶಿಕ ಆಯುಕ್ತರ ಕಛೇರಿಗೆ ಯಾವುದೇ ಮಾಹಿತಿ ರವಾನೆಯಾಗಿಲ್ಲ ಎನ್ನಲಾಗುತ್ತಿದೆ.

ಅದಲ್ಲದೇ ಈ ಬಾರಿ ಮೇಯರ್ ಚುನಾವಣೆಯೊಂದಿಗೆ ಸ್ಥಾಯಿ ಸಮಿತಿಗಳ ಚುನಾವಣೆ ಮಾಡಬೇಕಾಗಿತ್ತು. ಆದರೆ ಸಿಎಂ ಹೇಳಿಕೆಯಿಂದ ಮೇಯರ್ ಚುನಾವಣೆ ಅತಂತ್ರ ಸ್ಥಿತಿಯಾಗಿದೆ.

ಒಟ್ಟಿನಲ್ಲಿ ಸಿಎಂ ಕಾನೂನು ಉಲ್ಲಂಘನೆ ಮಾಡ್ತಾರಾ..? ಪ್ರಾದೇಶಿಕ ಆಯುಕ್ತರು ಮೇಯರ್ ಚುನಾವಣೆ ನಡೆಸುತ್ತಾರಾ..? ಬಿಜೆಪಿಯಲ್ಲಿ ಹುಟ್ಟಿಕೊಂಡ ಸಿಎಂ ಯಡಿಯೂರಪ್ಪ ಬಣ ಹಾಗೂ ನಳೀನ್ ಕುಮಾರ್ ಕಟೀಲು ಬಣದಲ್ಲಿ ಯಾವ ಬಣ ಗೆಲ್ಲುತ್ತೆ..? ಎಲ್ಲದಕ್ಕೂ ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights