ಬೆಳ್ಳಂ ಬೆಳಿಗ್ಗೆ ಜವರಾಯನ ಅಟ್ಟಹಾಸ : ಆಟೋಕ್ಕೆ ಲಾರಿ ಡಿಕ್ಕಿ – ಮೂವರು ಮೃತ

ಬೆಳ್ಳಂ ಬೆಳಿಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ.  ನಿಂತಿದ್ದ ಅಟೋಕ್ಕೆ ಕಬ್ಬಿನ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ತಾಯಿ ಮಗ ಸೇರಿದಂತೆ ಮೂವರು ಅಟೋದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಮೃತಪಟ್ಟಿದ್ದಾರೆ.

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗಡ್ಡೆಸೂಗುರು ಗೇಟ್ ಬಳಿ ಬೆಳಿಗ್ಗೆ ದುರ್ಘಟನೆ ಜರುಗಿದೆ.ವಡಗೇರಾ ತಾಲೂಕಿನ ಹಾಲಗೇರಾ ಗ್ರಾಮದ ನಿವಾಸಿ ಪಾಷಾ ಹಾಗೂ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕಟ್ಟಿ ಗ್ರಾಮದ ತಾಯಿ ಸಿದ್ದಮ್ಮ ಹಾಗೂ ಮಗ ರಮೇಶ ಮೃತಪಟ್ಟಿದ್ದಾರೆ.

ತಾಯಿ ಮಗ ದೇವರ ದರ್ಶನಕ್ಕೆಂದು ಹಾಲಗೇರಾ ಗ್ರಾಮದ ಎಲ್ಲಮ್ಮದೇವಿ ಮಂದಿರಕ್ಕೆ ತೆರಳುವಾಗ ದೇವಿಯ ದರ್ಶನ ಪಡೆಯುವ ಮುನ್ನವೇ ಜವರಾಯನ ಪಾದ ಸೇರಿದ್ದಾರೆ.ಘಟನೆಯಲ್ಲಿ 5 ಜನರಿಗೆ ಗಾಯವಾಗಿದ್ದು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ವಡಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights