ಭಾರತಕ್ಕೂ ಕಾಲಿಟ್ಟ ಕೊರೊನಾ ವೈರಸ್ : ಇಬ್ಬರು ರೋಗಿಗಳ ಸ್ಥಿತಿ ಸ್ಥಿರ
ಜಗತ್ತಿನಾದ್ಯಂತ ಒಟ್ಟು 3000ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದುಕೊಂಡ ಕೊರೊನಾ ವೈರಸ್ ಸೋಂಕು ಸದ್ಯ ಭಾರತಕ್ಕೂ ಕಾಲಿಟ್ಟಿದೆ.
ಹೆಮ್ಮರವಾಗಿ ಹರಡಿಕೊಳ್ಳುತ್ತಿರುವ ಕೋವಿಡ್-19 ದೆಹಲಿಯಲ್ಲಿ ಓರ್ವ ಹಾಗೂ ತೆಲಂಗಾಣ ಮೂಲದ ವ್ಯಕ್ತಿಯಲ್ಲಿ ಕಾಣಿಸಿಕೊಂಡು ಆತಂಕವನ್ನು ಸೃಷ್ಟಿ ಮಾಡಿದೆ.
ಕೊರೊನಾ ದಿಂದ ಚೀನಾ ದೇಶವೊಂದರಲ್ಲೇ ಈವರೆಗೆ 2912 ಮಂದಿ ಅಸುನೀಗಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ಭಾರತದಲ್ಲೂ ಈ ಮಾರಕ ಸೋಂಕು ಹರಡಿರುವುದು ದೃಢಪಟ್ಟಿದೆ.
ದೆಹಲಿ ಮೂಲದ ವ್ಯಕ್ತಿ ಇಟಲಿಯಿಂದ ಪ್ರಯಾಣ ಬೆಳೆಸಿದ್ದಾರೆ. ಹಾಗೂ ತೆಲಂಗಾಣದ ವ್ಯಕ್ತಿ ದುಬೈನಿಂದ ಪ್ರಯಾಣ ಮಾಡಿರುವುದರ ಇತಿಹಾಸವಿದೆ. ಇಬ್ಬರು ರೋಗಿಗಳ ಸ್ಥಿತಿ ಸ್ಥಿರವಾಗಿದ್ದು, ಮತ್ತು ಸೂಕ್ತ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.