ಭಾರತಕ್ಕೂ ಕಾಲಿಟ್ಟ ಕೊರೊನಾ ವೈರಸ್ : ಇಬ್ಬರು ರೋಗಿಗಳ ಸ್ಥಿತಿ ಸ್ಥಿರ

ಜಗತ್ತಿನಾದ್ಯಂತ ಒಟ್ಟು 3000ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದುಕೊಂಡ ಕೊರೊನಾ ವೈರಸ್ ಸೋಂಕು ಸದ್ಯ ಭಾರತಕ್ಕೂ ಕಾಲಿಟ್ಟಿದೆ.

ಹೆಮ್ಮರವಾಗಿ ಹರಡಿಕೊಳ್ಳುತ್ತಿರುವ ಕೋವಿಡ್-19 ದೆಹಲಿಯಲ್ಲಿ ಓರ್ವ ಹಾಗೂ ತೆಲಂಗಾಣ ಮೂಲದ ವ್ಯಕ್ತಿಯಲ್ಲಿ ಕಾಣಿಸಿಕೊಂಡು ಆತಂಕವನ್ನು ಸೃಷ್ಟಿ ಮಾಡಿದೆ.

ಕೊರೊನಾ ದಿಂದ ಚೀನಾ ದೇಶವೊಂದರಲ್ಲೇ ಈವರೆಗೆ 2912 ಮಂದಿ ಅಸುನೀಗಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ಭಾರತದಲ್ಲೂ ಈ ಮಾರಕ ಸೋಂಕು ಹರಡಿರುವುದು ದೃಢಪಟ್ಟಿದೆ.

ದೆಹಲಿ ಮೂಲದ ವ್ಯಕ್ತಿ ಇಟಲಿಯಿಂದ ಪ್ರಯಾಣ ಬೆಳೆಸಿದ್ದಾರೆ. ಹಾಗೂ ತೆಲಂಗಾಣದ ವ್ಯಕ್ತಿ ದುಬೈನಿಂದ ಪ್ರಯಾಣ ಮಾಡಿರುವುದರ ಇತಿಹಾಸವಿದೆ. ಇಬ್ಬರು ರೋಗಿಗಳ ಸ್ಥಿತಿ ಸ್ಥಿರವಾಗಿದ್ದು, ಮತ್ತು ಸೂಕ್ತ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights